ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆ (ರಿ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ :- ದಿನಾಂಕ 21-06-2015 ರಂದು ಡೋಣಿ ಗ್ರಾಮದ ಶ್ರೀ ಹಾಲಸೋಮೇಶ್ವರ ಮಠದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ವಿಶ್ವರಾಧ್ಯಹಾಲಸ್ವಾಮಿಗಳು ವಹಿಸಿದ್ದರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸದೃಡ ದೇಹದಲ್ಲಿ ಸದೃಡ ಮನಸ್ಸಿರುತ್ತದೆ ಎಂದು ಹೇಳಿ ಯೋಗದ ಮಹತ್ವ, ಯೋಗದ ವಿವಿಧ ಹಂತಗಳು ಯೋಗದಿಂದಾಗುವ ಉಪಯೋಗಗಳನ್ನು ತಿಳಿಸಿದರು. ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರವನ್ನು ಪ್ರಾಯೋಗಿಕವಾಗಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿ.ಎಚ್.ಜಕ್ಕಲಿ (ನಿವೃತ ಶಿಕ್ಷಕರು) ಹಾಗೂ ನಿಂಗಪ್ಪ ಅಳವುಂಡಿ (ಗ್ರಾಮದ ಹಿರಿಯರು) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಯೋಗದ ಮಹತ್ವ ತಿಳಿಸಿದರು ಎಸ್.ವಿ.ಗೌರಿಪುರ(ನೆಹರು ಯುವ ಕೇಂದ್ರದ ಪ್ರತಿನಿಧಿ) ನಿಂಗಪ್ಪ ಗುಡ್ಡದ. ಉಪಸ್ಥಿತರಿದ್ದರು. ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆಯ ಸರ್ವ ಸದಸ್ಯರು ಗ್ರಾಮದ ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.ವಿನಾಯಕ ಬೆಳ್ಳಿ. ನಿರೂಪಣೆ ಮಾಡಿದರು ಮಂಜುನಾಥ ವಾಲ್ಮೀಕಿ. ಸ್ವಾಗತಿಸಿದರು ಪ್ರವೀಣ ನಂಜಪ್ಪನವರ ಪುಷ್ಪಾರ್ಪಣೆ ಮಾಡಿದರು ಬಸನಗೌಡ ಕೆಂಚನಗೌಡ್ರ. ಪ್ರಾರ್ಥನೆ ಮಾಡಿದರು ಭರಮಪ್ಪ ಕಿಲಾರಿ. ವಂದಿಸಿದರು. ...
Sri Sadguru Shivayogi Halaswamy Samsathna Math Hirehadagali