ಶಿವಮೊಗ್ಗ ಜಿಲ್ಲೆಯ ಸೋಮಿನಕೊಪ್ಪ ಅಲದಹಳ್ಳಿ ಗ್ರಾಮದ ವೃತ್ತದಲ್ಲಿ ಭಕ್ತರ ಅಂತರಾತ್ಮದ ಒಡೆಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಭಗವತ್ಪಾದರ ಪ್ರತಿಮೆ ಸ್ಥಾಪಿಸುವ ಮೂಲಕ ಮಹಾ ಗುರುವಿನ ನೆನೆಪಗಳನ್ನು ಸದಾ ಕಾಲ ಹಸಿರಾಗಿ ಉಳಿಸಿಕೊಂಡ ಭಕ್ತ ಸಮೂಹ 📿
ಇಂದು ವಿಶ್ವ ವಿಶೇಷ ಚೇತನರ ದಿನ 1992 ರಿಂದ ವಿಶ್ವ ಸಂಸ್ಥೆಯು ವಿಶ್ವ ಚೇತನರ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು, ವಿಶೇಷ ಚೇತನರ ಸ್ವಾವಲಂಬನೆ ಮತ್ತು ಅವರ ಯೋಗಕ್ಷೇಮಗಳನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಚೇತನರು ಎಲ್ಲರಂತೆಯೇ ಬದುಕುವ ಸಾಮರ್ಥ್ಯವುಳ್ಳವರು. ಸಮಾಜದ ಇತರ ವ್ಯಕ್ತಿಗಳಂತೆ ಸಾಧಿಸುವ ಛಲ ಅವರಲ್ಲಿಯೂ ಇದೆ. ಅದನ್ನು ಗುರುತಿಸುವ ಕಾರ್ಯ ನಿರಂತರವಾಗಿರಲಿ ಎಂದು ಆಶಿಸುತ್ತೇನೆ. ಅವರನ್ನು ಪ್ರತ್ಯೇಕವಾಗಿ ನೋಡದೆ ನಮ್ಮೊಳಗೊಬ್ಬರಾಗಿ ಗುರುತಿಸೋಣ. #WorldDisabilityDay