Skip to main content

Posts

Showing posts from June, 2021

ಶ್ರೀ ಸದ್ಗುರು ಶಿವಯೋಗಿ ಹಾಲ ವೀರಪ್ಪಜ್ಜ ಮಹಾಸ್ವಾಮಿಗಳವರ ಮಹಾ ಪುಣ್ಯರಾಧನೆ

ಶ್ರೀಮದ್ ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಸಂಸ್ಥಾನ ಗುರುಪಾದ ದೇವರ ಮಠದ, ಶಿವಯೋಗ ತಪೋನಿಧಿ, ಸಮನ್ವಯಾಚಾರ್ಯ, ಭವರೋಗ ವೈದ್ಯರು, ಸದ್ಭಕ್ತರ ಅಮೃತೇಶ್ವರ ರು, ಜೀವೈಕ್ಕಾ ಸಮಾಧಿಸ್ತರಾದ ಶ್ರೀ ಸದ್ಗುರು ಶಿವಯೋಗಿ ಹಾಲ ವೀರಪ್ಪಜ್ಜ ಮಹಾಸ್ವಾಮಿಗಳವರ ಮಹಾ ಪುಣ್ಯರಾಧನೆ🙏🙏🙏🙏 ದಿನಾಂಕ:- 30-6-2021

ಶಿವಭಕ್ತಿ ಸಂಪನ್ನರಾದ ಮಾತೃಶ್ರೀ ರೇಣುಕಮ್ಮ ತಾಯಿಯವರ ನಾಲ್ಕನೇ ವರ್ಷದ ಮಹಾ ಪುಣ್ಯರಾಧನೆ.

ಅಪರೂಪದ ಪರಂಪರೆ ಅದ್ಭುತ ಆಚರಣೆ ಈ ಪರಂಪರೆಯು ಲೌಕಿಕ ಪಾರಮಾರ್ಥ ಗಳೆರಡರ ಬೆಸುಗೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ತುಂಬಿನ ಕೆರೆಯೂ ಒಂದು ಪುಟ್ಟ ಹಳ್ಳಿ. ಸಂಸ್ಕಾರ .ವೇದ. ವೈದ್ಯ ಜ್ಞಾನ ಗಳೆರಡೂ ನೆಲೆಗೊಂಡ ತುಂಬಿದ ಮನೆತನದ ಮಂಗಲ ಮೂರ್ತಿಯೆ ಶಿವ ಭಕ್ತಿ ಸಂಪನ್ನರಾದ ಶ್ರೀಮತಿ ಲಿಂಗೈಕ್ಯ ರೇಣುಕಮ್ಮನವರು.   ಶ್ರೀ ಡಾಕ್ಟರ್ ಲಿಂಗೈಕ್ಯ ನಾಗಬಸಯ್ಯ ನವರ ಶ್ರೀಮತಿ ಲಿಂಗೈಕ್ಯ ನೀಲಮ್ಮನವರ ಪುಣ್ಯ ಗರ್ಭದಲ್ಲಿ ಜನಿಸಿ .ಜಗತ್ತಿಗೆ ಧರ್ಮ. ಧಾರ್ಮಿಕತೆಯನ್ನು. ದಯೆಯನ್ನು ಸಮಾನತೆಯನ್ನು .ಬೋಧಿಸಿದ ಹಿರೇ ಹಡಗಲಿ ಹಾಲಸ್ವಾಮಿಗಳ ಪರಂಪರೆಯ ಶ್ರೀ ಲಿಂಗೈಕ್ಯ ಸದ್ಗುರು ಹಾಲಶಂಕರ ಹಾಲಸ್ವಾಮಿಗಳ ಲಿಂಗೈಕ್ಯ ಹಾಲಮ್ಮ ತಾಯಿ ಅವರ ಕೃಪಾ ಕರುಣಾ ದೃಷ್ಟಿಗೆ ಒಳಗಾಗಿ ಅವರ ಪ್ರೀತಿಯ ಮುದ್ದಿನ ಸೊಸೆಯಾದವರು .ಶ್ರೀಮಠದ ಹಿರಿಯ ಪರಮಪೂಜ್ಯ ಸದ್ಗುರು ಹಾಲವೀರಭದ್ರ ಸ್ವಾಮಿಗಳವರ ಜೊತೆಯಲ್ಲಿ 52 ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದವರು.ಸತಿ ಪತಿಗಳು ಒಂದಾದ ಭಕ್ತಿ ಹಿತ ವಪ್ಪುದು ಶಿವಂಗೆ ಎಂಬಂತೆ ಶ್ರೇಷ್ಠ ಸಂಸಾರವನ್ನು ನಡೆಸಿ ಹಾಲೇಶನ ಕೃಪೆಗೆ ಪಾತ್ರರಾದವರು . ಪಂಚ ಮಹಾ ತತ್ತ್ವಗಳಿಗೆ ಸಮ ಬರುವ ಪಂಚಪೀಠ ಚಾರ್ಯರ ಪರಂಪರೆಗಳ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು "ಪಂಚ ರತ್ನಗಳಿಗೆ "ಜನ್ಮ ನೀಡಿದವರು. ಪೃಥ್ವಿ ತತ್ತ್ವದ ಕರುಣೆ ಕಾಠಿಣ್ಯತೆ ಗಳಿಗೆ ಸ್ವರೂಪ ಎಂಬಂತೆ ಅಮ್ಮನ ಹಿರಿಯ ಸುಪುತ್ರಿ...

ವಿಶ್ವದಿಂದ ಕರೋನ ಮುಕ್ತಿಗಾಗಿ ಶ್ರೀ ಅಮೃತೇಶ್ವರ ಸ್ವಾಮೀಜಿಯವರ 21 ದಿನದ ಜಪಯಜ್ಞ ಇಂದು ಹೋಮದಲ್ಲಿ ಪೂರ್ಣಾಹುತಿ ನೀಡುವುದರ ಮುಖಾಂತರ ಪೂರ್ಣಗೊಂಡಿತು

ವಿಶ್ವದಿಂದ ಕರೋನ ಮುಕ್ತಿಗಾಗಿ ಶ್ರೀ ಅಮೃತೇಶ್ವರ ಸ್ವಾಮೀಜಿಯವರ 21 ದಿನದ ಜಪಯಜ್ಞ ಇಂದು ಹೋಮದಲ್ಲಿ ಪೂರ್ಣಾಹುತಿ ನೀಡುವುದರ ಮುಖಾಂತರ ದಿನಾಂಕ:29-05-2021 ಪೂರ್ಣಗೊಂಡಿತು. ಐತಿಹಾಸಿಕ ತಪೋಭೂಮಿ ಅನೇಕ ಮಹಾತ್ಮರು ಪಾದ ಸ್ಪರ್ಶಗೈದ ಪುಣ್ಯ ಭೂಮಿ  , ಜೊತೆಗೆ ಗುರುಸೇವೆ ಗೈದು ತಾವೆ ಗುರುವಾಗಿ ಮಹಾಯೋಗಿಗಳಾಗಿ ತಮ್ಮಗುರುಗಳ ಕಿರ್ತೀಯನ್ನು ನಾಡಿನುದ್ದಗಲಕ್ಕೂ ಪಸರಿಸಿ ಗುರುಗಳ ಸ್ವರೂಪದ ದ್ಯೋತಕವಾಗಿ  ಪವಾಡಪುರುಷ ಶ್ರೀ ಸದ್ಗರು ಶಿವಯೋಗಿ ರಾಂಪುರದ ಹಾಲಸ್ವಾಮಿಗಳ 250 ತೋರು ಗದ್ದುಗೆ ಶಾಖಮಠಗಳ ನಿರ್ಮಾಣ ಗೈದಂತ , ಹಠಯೋಗ ಸಿದ್ಧರು , ಮಹಾಮಹಿಮರು, ಶಿವಶರಣರು ,ಶಾಪನುಗ್ರಹ ಸಮರ್ಥರು , ಹಿರೇ ಹಡಗಲಿಯಲ್ಲಿ  ಜೀವಂತ ಸಮಾದಿಸ್ಥರಾದ ಸದ್ಗುರು ಶಿವಯೋಗಿ ಹಾಲವೀರಾರ್ಯ ಶಿವಯೋಗಿಗಳ ಸನ್ನಿಧಾನದಲ್ಲಿ ಲೋಕಕಲ್ಯಾಣಕ್ಕಾಗಿ  ಕರೋನ ನಿವಾರಣಾರ್ಥವಾಗಿ ಮತ್ತು ಶ್ರೀ ಅಮೃತೇಶ್ವರ ಶ್ರೀಗಳವರ ಒಂದು ಮಂಡಲ ಅನುಷ್ಠಾನ ಮುಕ್ತಾಯಕ್ಕಾಗಿ ಹಾಗೂ ಧನ್ವವಂತರಿ  ಹೋಮವನ್ನು ನಡೆಸಲಾಯಿತು.  ಸಾನಿಧ್ಯದಲ್ಲಿ  ಶ್ರೀಮಠದ ವೈಧ್ಯರತ್ನ ಆಯುರ್ವೇದ ಪಂಡಿತರಾದ ಸದ್ಗುರು ಶಿವಯೋಗಿ ಹಾಲಸೋಮೆಶ್ವರ ಶ್ರೀಗಳ ಹಾಗೂ  ಕೃಷಿಋಷಿ ಸದ್ಗುರು ಶಿವಯೋಗಿ  ಸಣ್ಣ ಹಾಲಸ್ವಾಮಿಗಳ ಹಾಗೂ ಶಿವಶರಣ ಹಾಲ ಅಭಿಷೇಕ ಶರಣರ ಮತ್ತು ಶ್ರೀ ವಿಶ್ವಪಂಡಿತಾರಾಧ್ಯ ಶ್ರೀಗಳ ಮತ್ತು ಪ್ರಕಾಶ ಶಾಸ್ತ್ರಿಗಳು ರಾಚಯ್ಯ ಶಾಸ್ತ್ರಿಗಳು ಇನ್ನಿತರ ಸದ್ಭಕ್ತರೊಂದಿಗೆ...