Skip to main content

ಶಿವಭಕ್ತಿ ಸಂಪನ್ನರಾದ ಮಾತೃಶ್ರೀ ರೇಣುಕಮ್ಮ ತಾಯಿಯವರ ನಾಲ್ಕನೇ ವರ್ಷದ ಮಹಾ ಪುಣ್ಯರಾಧನೆ.

ಅಪರೂಪದ ಪರಂಪರೆ ಅದ್ಭುತ ಆಚರಣೆ ಈ ಪರಂಪರೆಯು ಲೌಕಿಕ ಪಾರಮಾರ್ಥ ಗಳೆರಡರ ಬೆಸುಗೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ತುಂಬಿನ ಕೆರೆಯೂ ಒಂದು ಪುಟ್ಟ ಹಳ್ಳಿ. ಸಂಸ್ಕಾರ .ವೇದ. ವೈದ್ಯ ಜ್ಞಾನ ಗಳೆರಡೂ ನೆಲೆಗೊಂಡ ತುಂಬಿದ ಮನೆತನದ ಮಂಗಲ ಮೂರ್ತಿಯೆ ಶಿವ ಭಕ್ತಿ ಸಂಪನ್ನರಾದ ಶ್ರೀಮತಿ ಲಿಂಗೈಕ್ಯ ರೇಣುಕಮ್ಮನವರು. 
 ಶ್ರೀ ಡಾಕ್ಟರ್ ಲಿಂಗೈಕ್ಯ ನಾಗಬಸಯ್ಯ ನವರ ಶ್ರೀಮತಿ ಲಿಂಗೈಕ್ಯ ನೀಲಮ್ಮನವರ ಪುಣ್ಯ ಗರ್ಭದಲ್ಲಿ ಜನಿಸಿ .ಜಗತ್ತಿಗೆ ಧರ್ಮ. ಧಾರ್ಮಿಕತೆಯನ್ನು. ದಯೆಯನ್ನು ಸಮಾನತೆಯನ್ನು .ಬೋಧಿಸಿದ ಹಿರೇ ಹಡಗಲಿ ಹಾಲಸ್ವಾಮಿಗಳ ಪರಂಪರೆಯ ಶ್ರೀ ಲಿಂಗೈಕ್ಯ ಸದ್ಗುರು ಹಾಲಶಂಕರ ಹಾಲಸ್ವಾಮಿಗಳ ಲಿಂಗೈಕ್ಯ ಹಾಲಮ್ಮ ತಾಯಿ ಅವರ ಕೃಪಾ ಕರುಣಾ ದೃಷ್ಟಿಗೆ ಒಳಗಾಗಿ ಅವರ ಪ್ರೀತಿಯ ಮುದ್ದಿನ ಸೊಸೆಯಾದವರು .ಶ್ರೀಮಠದ ಹಿರಿಯ ಪರಮಪೂಜ್ಯ ಸದ್ಗುರು ಹಾಲವೀರಭದ್ರ ಸ್ವಾಮಿಗಳವರ ಜೊತೆಯಲ್ಲಿ 52 ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದವರು.ಸತಿ ಪತಿಗಳು ಒಂದಾದ ಭಕ್ತಿ ಹಿತ ವಪ್ಪುದು ಶಿವಂಗೆ ಎಂಬಂತೆ ಶ್ರೇಷ್ಠ ಸಂಸಾರವನ್ನು ನಡೆಸಿ ಹಾಲೇಶನ ಕೃಪೆಗೆ ಪಾತ್ರರಾದವರು .
ಪಂಚ ಮಹಾ ತತ್ತ್ವಗಳಿಗೆ ಸಮ ಬರುವ ಪಂಚಪೀಠ ಚಾರ್ಯರ ಪರಂಪರೆಗಳ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು "ಪಂಚ ರತ್ನಗಳಿಗೆ "ಜನ್ಮ ನೀಡಿದವರು.
ಪೃಥ್ವಿ ತತ್ತ್ವದ ಕರುಣೆ ಕಾಠಿಣ್ಯತೆ ಗಳಿಗೆ ಸ್ವರೂಪ ಎಂಬಂತೆ ಅಮ್ಮನ ಹಿರಿಯ ಸುಪುತ್ರಿಯಾದ ಶ್ರೀಮತಿ ವೀರಮ್ಮ ಮಲ್ಲಿಕಾರ್ಜುನ ಸ್ವಾಮಿ ಅವರು ತಾಯ್ತನದ ಜವಾಬ್ದಾರಿಯನ್ನು ಹೊತ್ತುಕೊಂಡು ಎಲ್ಲರ ಪ್ರೀತಿಗೆ ಕಾರಣರಾದವರು .
ನಮ್ಮ ಅಮ್ಮನವರ ದ್ವಿತೀಯ ಸುಪುತ್ರಿಯಾದ ಆಪ್ ತತ್ತ್ವಕ್ಕೆ ಸಮ ಬರುವ ಜಲದಂತೆ ಶುದ್ಧ ಪರಿಶುದ್ಧ ಜೀವನವನ್ನು ನಡೆಸುತ್ತಿರುವಂತ ಶ್ರೀಮತಿ ಅಂಬಿಕಾ ವೀರೇಶ ಸ್ವಾಮಿ ಅವರು ಅಮ್ಮನ ಮೌನ ತಾಳ್ಮೆಗಳನ್ನು ಅಳವಡಿಸಿಕೊಂಡಿರುವವರು.
ಅಮ್ಮನವರ ತೃತೀಯ ಪುತ್ರಿಯಾಗಿ ತೇಜಾ ತತ್ವದಂತೆ ತೇಜೋ ಮೂರ್ತಿಯಾಗಿ ಸುಖ ದುಃಖಗಳೆರಡನ್ನೂ ಸಮವಾಗಿ ಕಂಡು ಅಮ್ಮನ ಪ್ರೀತಿಗೆ ಪಾತ್ರರಾದಂತ ಶ್ರೀಮತಿ ಬಸಮ್ಮ ರುದ್ರಗೌಡ ಪಾಟೀಲ್ ಅವರು .
ಅಮ್ಮನವರ ನಾಲ್ಕನೇ ಸುಪುತ್ರರಾದ ಪಂಚ ತತ್ತ್ವಗಳಲ್ಲಿ ವಾಯು ತತ್ತ್ವಕ್ಕೆ ಸಮ ಬರುವ ಅಪರೂಪದ ಸಹೋದರರ ಚಿರಂಜೀವಿ ಶ್ರೀ ಹಾಲವೀರಪ್ಪಜ್ಜ ಮಹಾಸ್ವಾಮಿಗಳವರು ತಂದೆಗೆ ಪ್ರೀತಿಯ ಸುತನಾಗಿ ತಾಯಿಗೆ ಶ್ರೇಷ್ಠ ಮಗನಾಗಿ ಸಹೋದರಿಯರಿಗೆ ಶ್ರೇಷ್ಠ ತಮ್ಮನಾಗಿ ಎಲ್ಲಾ ಸಹೋದರರಿಗೆ ಪ್ರೀತಿಯ ಅಣ್ಣನಾಗಿ ಶ್ರೀರಾಂಪುರ ಹಾಲಸ್ವಾಮಿಗಳ ಶಾಖಾ ಸಂಸ್ಥಾನ ಹಿರೇಹಡಗಲಿ ಮಠದ ಕೀರ್ತಿಯನ್ನು ನಾಡಿನುದ್ದಗಲಕ್ಕೂ ಪರಿಚಯಿಸಿ ಹಾಲೇಶನ ಪರಂಪರೆಯನ್ನು ಎಲ್ಲ ಸಹೋದರರೊಂದಿಗೆ ಸಮಾನತೆಯೊಂದಿಗೆ ಮುಂನಡೆಸಿಕೊಂಡು ಬರುತ್ತಿರುವವರು .
ಅಮ್ಮನವರ ಪಂಚಮ ರತ್ನವೇ ಪಂಚ ತತ್ವದ ಕೊನೆಯ ತತ್ವವೇ ಆಕಾಶ ತತ್ವ ಆಕಾಶದಂತೆ ವಿಶಾಲ ಭಾವನೆಯನ್ನು ಹೊತ್ತುಕೊಂಡು ಎಲ್ಲ ಸಹೋದರ ಸಹೋದರಿಯರೊಂದಿಗೆ ಪ್ರೀತಿಯ ಕ್ಷಣಗಳನ್ನು ಕಳೆಯುತ್ತ ನಗುಮುಖದೊಂದಿಗೆ ಇರುವ ಕುಂಕುಮ ಸೌಭಾಗ್ಯವತಿ ಶ್ರೀ ಸಂಗಮ್ಮ ಕೊಟ್ರೇಶ ಸ್ವಾಮಿಯವರು .
ಲಿಂಗೈಕ್ಯ ರೇಣುಕಮ್ಮ ನವರು ಶ್ರೀಮಠದ ದ್ವಿತೀಯ ಮಾತೆಯಾಗಿ ತ್ರಿಮೂರ್ತಿ ಪೂಜ್ಯರಿಗೆ ಸಮಾನತೆಯ ಪ್ರೀತಿಯ ಹಂಚಿದ ಕರುಣಾಮಯಿ ಇವರು.
ಇಂತಹ ಲಿಂಗೈಕ್ಯ ಮಾತೆಯ ನಾಲ್ಕನೇ ವರ್ಷದ ಮಹಾ ಪುಣ್ಯರಾಧನೆ. ಶ್ರೀಮಠದ ಸಮಸ್ತ ಕುಟುಂಬದವರು ಮತ್ತು ಎಲ್ಲಾ ಮಕ್ಕಳು ಮೊಮ್ಮಕ್ಕಳು ನಾಡಿನ ಸಮಸ್ತ ಸದ್ಭಕ್ತರು ,
ಅಂತಹ ಮಹಾ ಮಾತೆ ಮತ್ತೊಮ್ಮೆ ಮುಂದೊಮ್ಮೆ ತುಂಬು ಕುಟುಂಬದೊಂದಿಗೆ ಎಲ್ಲರ ಜೊತೆಯಲ್ಲಿ ತಾಯ್ತನದ ಪ್ರೀತಿಯನ್ನು ನೀಡುವಂತೆ ಈ ಪರಂಪರೆಯಲ್ಲಿ ಜನಿಸಿ ಬರುವಂತೆ ಗುರು ಹಾಲೇಶ ನಲ್ಲಿ ಬೇಡಿಕೊಂಡು .
ಅಂತಹ ಮಾತೆಯ ಪುಣ್ಯರಾದನೆಯನ್ನು ದಿನಾಂಕ 21/06/2021 ನೇ ಸೋಮವಾರ ರಂದು 
ಅಮ್ಮನವರ ಮಹಾ ಸ್ಮರಣೋತ್ಸವ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುವ.
ಶ್ರೀಮಠದ ಪೂಜ್ಯರು ಮತ್ತು ಸಮಸ್ತ ಸದ್ಭಕ್ತ ಮಂಡಳಿ ಅಪಾರ ಬಂಧು ಬಳಗದವರು.

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.