ಮಕ್ಕಳಾ ಜೊತೆಗೆ ಸದಾ ಮಗುವಾದವನೇ..ಮಗುವಿನಂಥ ಮನಸ ಹೊತ್ತ ದಿವ್ಯ ಸಂತನೇ.ವಿಶ್ವಾರಾಧ್ಯನೇ ಹಾಲವಿಶ್ವಾರಾಧ್ಯನೇ...ಮೌನ ಋಷಿಯಾಗಿ ಮಮತೆ ಮಳೆಯಾದವನೇ!
ಮಕ್ಕಳಾ ಜೊತೆಗೆ ಸದಾ ಮಗುವಾದವನೇ.. ಮಗುವಿನಂಥ ಮನಸ ಹೊತ್ತ ದಿವ್ಯ ಸಂತನೇ. ವಿಶ್ವಾರಾಧ್ಯನೇ ಹಾಲವಿಶ್ವಾರಾಧ್ಯನೇ... ಮೌನ ಋಷಿಯಾಗಿ ಮಮತೆ ಮಳೆಯಾದವನೇ! ಗಿಡ ಮರ ಬೆಟ್ಟಕಾಡೇ ನಿನ್ನಾಶ್ರಮವೂ... ಮುಗ್ಧಪ್ರಾಣಿ ಒಡನಾಟವೇ ನಿನ್ನ ಪೂಜೆಯು. ಸದಾ ನಗುವ ಹೊತ್ತು ನಡೆವ ನೀನೇ ಧನ್ಯನು. ಮೃದು ಮಾತಿನಲ್ಲೇ ಸೆಳೆವ ಪೂರ್ಣಚಂದ್ರನು. ವಿಶ್ವರೂಪನೇ...ಸ್ವಾಮೀ ವಿಶ್ವಾರಾಧ್ಯನೇ. ಮೌನ ಋಷಿಯಾಗಿ ನಮಗೆ ಗುರುವಾದವನೇ. ಅಷ್ಟಾವರಣ ಷಟಸ್ಥಲ ಪಂಚಾಚಾರವೂ.. ಬೇಕಾ ನಮಗೆ ಮೋಕ್ಷಕೊಂದು ಲಿಂಗಪೂಜೆಯು. ಸಾಕಲ್ಲವೇ ಪ್ರೀತಿ ಮಮತೆ ಸಹಬಾಳ್ವೆಯೂ ನೀನೇ ತಾನೇ ದಾರಿ ತೋರ್ವ ಬೆಳಕೆಲ್ಲವೂ.. ವಿಶ್ವರೂಪನೇ...ಸ್ವಾಮೀ ವಿಶ್ವಾರಾಧ್ಯನೇ.. ಮೌನ ಋಷಿಯಾಗಿ ನಮಗೆ ಗುರುವಾದವನೇ. ಗೀತೆ ರಚನೆ: ನಾಗರಾಜ್ ಜಿಎಂ, ಹಿರೇಕುಂಬಳಗುಂಟೆ ...