ನಾಡಿನ ಸಮಸ್ತ ರೈತಾಪಿ ವರ್ಗಕ್ಕೆ ಸಕಾಲದಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ದೊರೆಯಲಿ ಹಾಗೂ ಲೋಕಕಲ್ಯಾಣವಾಗಲಿ ಎಂಬ ಸದುದ್ದೇಶದಿಂದ ಶ್ರೀ ಗುರು ಹಾಲೇಶನವರ ದಿವ್ಯ ಸನ್ನಿಧಾನದಲ್ಲಿ ವಿಶೇಷ ಗುರುಪೂರ್ಣಿಮೆಯ,ರುದ್ರಾಭಿಷೇಕ, ಮಹಾಪೂಜೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಗುರುಪೂರ್ಣಿಮೆಯ ಪಾವನ ಸಂದರ್ಭದಲ್ಲಿ ಶ್ರೀಮಠದಲ್ಲಿ ವಿಶೇಷ ರುದ್ರಾಭಿಷೇಕ ಇಂದು ಗುರುಪೂರ್ಣಿಮೆಯ ಈ ಮಹಾಪುಣ್ಯದಿನದಂದು ಶ್ರೀಮಠದಲ್ಲಿ ಭಕ್ತಿಭಾವ ಮತ್ತು ವೈದಿಕ ಸಂಪ್ರದಾಯದ ಸೊಬಗಿನಿಂದ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು. ನಾಡಿನ ಸಮಸ್ತ ರೈತಾಪಿ ವರ್ಗಕ್ಕೆ ಸಕಾಲದಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ದೊರೆಯಲಿ ಹಾಗೂ ಲೋಕಕಲ್ಯಾಣವಾಗಲಿ ಎಂಬ ಸದುದ್ದೇಶದಿಂದ ಶ್ರೀ ಗುರು ಹಾಲೇಶನವರ ದಿವ್ಯ ಸನ್ನಿಧಾನದಲ್ಲಿ ವಿಶೇಷ ರುದ್ರಾಭಿಷೇಕ, ಮಹಾಪೂಜೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಈ ಪವಿತ್ರ ಧಾರ್ಮಿಕ ವಿಧಿವಿಧಾನಗಳು ಶ್ರೀಮಠದ ಮರಿ ದೇವರುಗಳಾದ ಪರಮಪೂಜ್ಯ ಶ್ರೀ ಓಂಕಾರೇಶ್ವರ ಹಾಲಸ್ವಾಮೀಜಿಯವರು ಹಾಗೂ ಪರಮಪೂಜ್ಯ ಶ್ರೀ ಅಭಿಷೇಕ ಹಾಲಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ವೈದಿಕ ಮಂತ್ರೋಚ್ಚಾರಣೆಗಳೊಂದಿಗೆ ಶಾಸ್ತ್ರೋಕ್ತವಾಗಿ ಮತ್ತು ಅತ್ಯಂತ ಭಕ್ತಿಭಾವದಿಂದ ನೆರವೇರಿದವು. ಗುರುಕೃಪೆ, ದೇವಾನುಗ್ರಹ ಹಾಗೂ ಪ್ರಕೃತಿಯ ಕರುಣೆ ಸದಾ ಸಮಸ್ತ ಭಕ್ತರಿಗೆ ಲಭಿಸಲಿ, ರೈತರ ಬದುಕು ಹಸನಾಗಲಿ, ಧರ್ಮದ ಬೆಳಕು ಎಲ್ಲೆಡೆ ಹರಡಲಿ ಎಂಬ ಪ್ರಾರ್ಥನೆಯೊಂದಿಗೆ ಗುರುಪೂರ್ಣಿಮೆಯ ಈ ಪಾವನ ದಿನವನ್ನು ಶ್ರೀಮಠದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. "ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ । ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗು...