Skip to main content

ಜಾಗೃತಿ ಮೂಡಿಸುವ ಶಿವಯೋಗಾನುಷ್ಠಾನ halaswamy math


http://46.5c.344a.static.theplanet.com/UserFiles/Image/Common/pvmast.jpg
ಭಾನುವಾರ , ಡಿಸೆಂಬರ್ 5, 2010

 ಎನ್.ವಿ. ರಮೇಶ್
ಹಾಲಸ್ವಾಮಿ ಗವಿಮಠದಲ್ಲಿ ನಾಲ್ಕು ದಶಕಗಳಿಂದ ಪ್ರತಿವರ್ಷ ಕಾರ್ತೀಕ ಮಾಸದಲ್ಲಿ 21 ದಿನಗಳ ಕಾಲ ನಡೆಯುವ ಶಿವಯೋಗಾನುಷ್ಠಾನ ಕಾರ್ಯಕ್ರಮ ಸಾಮಾಜಿಕ ಜಾಗೃತಿಯನ್ನು ಉಂಟುಮಾಡುವಲ್ಲಿ ಮಹತ್ತರ ಪಾತ್ರವಹಿಸುತ್ತಾ ಬಂದಿದೆ.
ರಾಂಪುರ ಬೃಹನ್ಮಠದ ಮೂಲ ಮಠವಾದ ಇಲ್ಲಿನ ಗವಿಮಠದಲ್ಲಿ  1973ರಲ್ಲಿ ಹಿರಿಯ ಪೀಠಾಧೀಶ ವಿಶ್ವಾರಾಧ್ಯ ಸ್ವಾಮಿಗಳು ಆರಂಭಿಸಿದ ಶಿವಯೋಗಾನುಷ್ಠಾನ ಕಾರ್ಯಕ್ರಮ ಕೇವಲ ಧಾರ್ಮಿಕ ಆಚರಣೆಗೆ ಮಾತ್ರ ಮೀಸಲಾಗದೇ, ಸಾಮಾಜಿಕ ಸಮಾನತೆ, ಬೌದ್ಧಿಕ ಕ್ರಾಂತಿಯೊಂದಿಗೆ ನಾಡಿನ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿದು ಜಾಗೃತಿಯನ್ನು ಮೂಡಿಸುತ್ತಿದೆ.
ಕಾರ್ಯಕ್ರಮದ ಅಂಗವಾಗಿ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿಯವರು 21 ದಿನಗಳ ಕಾಲ ಉಪವಾಸ ವ್ರತದಿಂದ ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಿಂದ ಸತತ 12 ಗಂಟೆಗಳ ಶಿವಧ್ಯಾನ ನಡೆಸಿ, ಸಂಜೆ 7ಕ್ಕೆ ಸರಿಯಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ರಾತ್ರಿ 11ಕ್ಕೆ ಪುರಾಣ ಪ್ರವಚನ, ನಾಡಿನ ಪ್ರಸಿದ್ಧ ವಿದ್ವಾಂಸರು ಸಾಹಿತಿಗಳಿಂದ ಉಪನ್ಯಾಸ, ಜಾನಪದ ಮತ್ತು ಸುಗಮ ಸಂಗೀತ ಮುಂತಾದವುಗಳ ನಂತರ ಆಶೀರ್ವಚನ ನೀಡುತ್ತಾರೆ. ಅನುಷ್ಠಾನದಲ್ಲಿ ಮೂರುದಿನ ಮಹಿಳೆಯರಿಗಾಗಿ ಕಾರ್ಯಕ್ರಮವನ್ನು ಮೀಸಲಿರುತ್ತದೆ.
ವರ್ಷದ ಹನ್ನೆರಡು ತಿಂಗಳು ನಡೆಯುವ ಅನ್ನ ದಾಸೋಹ ಈ ಕಾರ್ಯಕ್ರಮದಲ್ಲಿ ವಿಶೇಷತೆ ಪಡೆದಿರುತ್ತದೆ. ಅನುಷ್ಠಾನದ ಅಂಗವಾಗಿ ನಾಡಿನ ಕಲಾವಿದರು, ಸಮಾಜಸೇವಕರಿಗೆ ಪುರಸ್ಕಾರ, ಕೊನೆಯದಿನ ಸಮಾಜದ ಎಲ್ಲಾ ವರ್ಗದವರನ್ನು ಒಳಗೊಂಡಂತೆ ಉಚಿತ ಸಾಮೂಹಿಕ ವಿವಾಹದ ಮೂಲಕ ಸರಳ ವಿವಾಹಕ್ಕೆ ಮಾದರಿ ಆಗುತ್ತಿದೆ. ಇದರಲ್ಲಿ ವಧೂವರರಿಗೆ ಮಾಂಗಲ್ಯ ಮತ್ತು ಬಟ್ಟೆಯ ದಾನವೂ ಇರುತ್ತದೆ. ನಂತರದಲ್ಲಿ ನಡೆಯುವ ಪ್ರಮುಖ ಆಕರ್ಷಣೆ ಕುಂಬಾಭಿಷೇಕ. ಇದಕ್ಕಾಗಿ ಸಾವಿರಾರು ಜನರನ್ನು ಒಳಗೊಂಡ ಕುಂಬ ಮೇಳ ಆಗಮಿಸಿದ ಭಕ್ತರಲ್ಲಿ ಭಕ್ತಿಯ ಮಹಾಪೂರವನ್ನೇ ಹರಿಸುತ್ತದೆ.
ಜಾತಿ ಭೇದ, ಮೇಲು ಕೀಳು ಭಾವನೆಗಳನ್ನು ಎಣಿಸದೇ ಎಲ್ಲರನ್ನೂ ಒಳಗೊಂಡು ನಡೆಯುವ ಈ ಕಾರ್ಯಕ್ರಮ ವರ್ಷ ವರ್ಷಕ್ಕೆ ಮೆರುಗನ್ನು ಪಡೆಯುತ್ತಿದೆ. ಸ್ಥಳೀಯ ಕಲಾವಿದರನ್ನು ಒಳಗೊಂಡ ಕಲಾ ಬಳಗವನ್ನು ಸ್ವಾಮೀಜಿಯವರು ಬೆಳೆಸಿ ಪೋಷಿಸುತ್ತಿದ್ದಾರೆ. ಸಮಾಜದ ಉದ್ಧಾರವೇ ಮಠದ ಧ್ಯೇಯ. ಅದನ್ನು ಸಫಲಗೊಳಿಸುವಲ್ಲಿ ಹಿರಿಯ ಶ್ರೀಗಳಾದ ವಿಶ್ವಾರಾಧ್ಯ ಸ್ವಾಮಿಗಳ ಮಾರ್ಗದರ್ಶನ ಮತ್ತು ಜನತೆಯ ಸಹಕಾರ ನಮಗೆ ಮುಖ್ಯ ಎಂದು ವಿಶ್ವೇಶ್ವರ ಸ್ವಾಮೀಜಿ ನುಡಿಯುತ್ತಾರೆ.   

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.