Skip to main content

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ 
ಆಹ್ವಾನ ಪತ್ರಿಕೆ 

ದಿನಾಂಕ 1-3-2021 ನೇ ಸೋಮವಾರ
ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ.

ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ
ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ)
ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ
ದಿವ್ಯ ಸಮ್ಮುಖದಲ್ಲಿ

ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇಷ್ಟ ಮಿತ್ರ ಬಂಧು ಬಾಂಧವರೊಡಗೂಡಿ ಆಗಮಿಸಿ ಶ್ರೀ ಗುರು ಕಾರ್ಯದಲ್ಲಿ ಭಾಗವಹಿಸಿ ಶ್ರೀ ಗುರು ಆಶೀರ್ವಾದದ ಕೃಪೆಗೆ ಪಾತ್ರರಾಗಬೇಕಾಗಿ ಶೃತಪಡಿಸಿದೆ.

ಕಾರ್ಯಕ್ರಮಗಳು
ದಿನಾಂಕ 27-2-2020 ನೇ ಶನಿವಾರ ಬೆಳಗ್ಗೆ ಹೋಟ್ಯಾಪುರ ಹಿರೇಮಠ್ ಅಧ್ಯಕ್ಷರಾದ ಶ್ರೀ ಷಟಸ್ಥಲ ಬ್ರಹ್ಮ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ರುದ್ರಾಭಿಷೇಕ, ಶಿವದೀಕ್ಷೆ, ಮಂತ್ರೋಪದೇಶ ಧ್ವಜಾರೋಹಣ ಶ್ರೀ ಸ್ವಾಮಿ ಕಂಕಣಧಾರಣೆ (ಶಿವದೀಕ್ಷೆಯ ದಲ್ಲಿ ಭಾಗವಹಿಸುವವರು ದಿನಾಂಕ 26-2-2020 ನೇ ಶುಕ್ರವಾರ ಸಂಜೆ ಬರತಕ್ಕದ್ದು)
ದಿನಾಂಕ 27-2-2020 ನೇ ಶನಿವಾರ ಬೆಳಗ್ಗೆ ಉಚ್ಚಾಯ ಅಶ್ವಾರೋಹಣ
ದಿನಾಂಕ 28-2-2021 ನೇ ಭಾನುವಾರ ಮಧ್ಯಾಹ್ನ ಸಿಂಹಾರೋಹಣ ಉಚ್ಚಾಯ

ದಿನಾಂಕ 1-3-2021 ನೇ ಸೋಮವಾರ ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವ ಉಚಿತ ಸಾಮೂಹಿಕ ವಿವಾಹ ಮತ್ತು ಮಕ್ಕಳ ಜವಳ ಕಾರ್ಯಿರುತ್ತದೆ.
1-3-2021 ರಿಂದ 3-3-2021ರ ವರೆಗೆ ಮಕ್ಕಳ ಜವಳ (ಚೌಲ) ಕಾರ್ಯರುತ್ತದೆ.
3-3-2021ನೇ ಬುಧವಾರ ಬೆಳಗ್ಗೆ ಆವಭೃತ ಸ್ನಾನ (ಕಂಕಣ ವಿಸರ್ಜನೆ)
ಸ್ವಾಮಿಯ ಹರಕೆ ಕಾಣಿಕೆ ಇತ್ಯಾದಿಗಳನ್ನು ಸನ್ನಿಧಿ ಸದರಿನಲ್ಲಿ ಕುಂತಾಗ ಅರ್ಪಿಸಬೇಕಾಗಿ ಶೃತ)

ವಿಶೇಷ ಸೂಚನೆ:- ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧುವಿಗೆ 18 ವರ್ಷ ,ವರನ ವಯಸ್ಸು 22 ವರ್ಷ ವಯಸ್ಸಿನ ದೃಢೀಕರಣ ಪತ್ರ ಶಾಲಾ ದಾಖಲಾತಿ ಗ್ರಾಮ ಪಂಚಾಯಿತಿ ನಿವಾಸಿ ದೃಢೀಕರಣ ಪತ್ರ ಇತರೆ ದಾಖಲಾತಿಗಳನ್ನು ಫೆಬ್ರವರಿ 26 ರೊಳಗಾಗಿ ಶ್ರೀಮಠಕ್ಕೆ ತಲುಪಿದ ತಕ್ಕದ್ದು.

ಸಂಪರ್ಕಿಸಿ -ಆರ್ ಎಂ ಹಾಲೇಶ್ ಅಯ್ಯಾ ನ್ಯಾಯಬೆಲೆ ಅಂಗಡಿ ರಾಂಪುರ 9480297799.

ವಿಶೇಷ ಸೂಚನೆ :- ವಧು-ವರರಿಗೆ ಕೇವಲ ಬಟ್ಟೆಗಳನ್ನು ಮಾತ್ರ ನೀಡಲಾಗುವುದು.

ಶ್ರೀ ಹಾಲಸ್ವಾಮೀಜಿ ಮಹಾಸಂಸ್ಥಾನದ ವಿದ್ಯಾಸಂಸ್ಥೆಗಳು 
ಶ್ರೀಹಾಲಸ್ವಾಮಿ ಗ್ರಾಮಾಂತರ ಕೈಗಾರಿಕಾ ತರಬೇತಿ ಕೇಂದ್ರ ರಾಂಪುರ ರಸ್ತೆ ಸಾಸ್ವೆಹಳ್ಳಿ 
ನವಸುಮ ಹಿರಿಯ ಪ್ರಾಥಮಿಕ ಶಾಲೆ
ಶ್ರೀ ಮಠದ ಆವರಣ ರಾಂಪುರ.


ವ್ಯವಸ್ಥಾಪಕರು
ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಮಹಾಸಂಸ್ಥಾನದ ಸಕಲ ಸದ್ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು.

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.