Skip to main content

Posts

Showing posts from 2020

ಲಿಂಗೈಕ್ಯ ಶ್ರೀ ಷ. ಬ್ರ .ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮಿಗಳವರ ಕರ್ತೃಗದ್ದುಗೆಗೆ ಶಿಲಾನ್ಯಾಸ ಮತ್ತು ಶ್ರೀ ಹಾಲಸ್ವಾಮಿ ಗೋಶಾಲೆ ಲೋಕಾರ್ಪಣೆ.

ಶ್ರೀ ಹಾಲಸ್ವಾಮಿ ಬೃಹನ್ಮಠ ರಾಂಪುರ  ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು, ಗವಿಮಠ ಬಸವಪಟ್ಟಣ, ಶಿಲಾಮಠ ಗುಂಡೇರಿ, ಶಿಲಾಮಠ ಹಿರಿಯೂರು, ಲಿಂಗೈಕ್ಯ ಶ್ರೀ ಷ. ಬ್ರ .ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮಿಗಳವರ ಕರ್ತೃಗದ್ದುಗೆಗೆ ಶಿಲಾನ್ಯಾಸ ಮತ್ತು ಶ್ರೀ ಹಾಲಸ್ವಾಮಿ ಗೋಶಾಲೆ ಲೋಕಾರ್ಪಣೆ. ದಿವ್ಯಸಾನಿಧ್ಯ ಶ್ರೀ ಷ .ಬ್ರ ಡಾ.ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರು, ಹಿರೇಕಲ್ಮಠ ಹೊನ್ನಾಳಿ. ಶ್ರೀ ಷ ಬ್ರ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, ಹಿರೇಮಠ ಹೊಟ್ಟಾಪುರ. ಮುಖ್ಯ ಅತಿಥಿಗಳು  ಶ್ರೀ ಕೆ.ಎಸ್ ಈಶ್ವರಪ್ಪನವರು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು. ಶ್ರೀ ಜಿ.ಎಂ ಸಿದ್ದೇಶ್ವರ, ಮಾಜಿ ಕೇಂದ್ರ ಸಚಿವರು ಲೋಕಸಭಾ ಸದಸ್ಯರು ದಾವಣಗೆರೆ. ಶ್ರೀ ಬಿ.ವೈ ರಾಘವೇಂದ್ರ ಲೋಕಸಭಾ ಸದಸ್ಯರು ಶಿವಮೊಗ್ಗ . ಶ್ರೀ ಎಂ.ಪಿ ರೇಣುಕಾಚಾರ್ಯ ಶಾಸಕರು ಹೊನ್ನಾಳಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು. ಶ್ರೀ ಮಾಡಾಳು ವಿರುಪಾಕ್ಷಪ್ಪ ಶಾಸಕರು ಚನ್ನಗಿರಿ ಹಾಗೂ ಅಧ್ಯಕ್ಷರು ಕೆ ಎಸ್ ಡಿ ಎಲ್ ಶ್ರೀ ಕೆ. ಬಿ ಅಶೋಕ್ ನಾಯ್ಡು ಶಾಸಕರು ಶಿವಮೊಗ್ಗ ಗ್ರಾಮಂತರ. ಪ್ರೊ ಲಿಂಗಣ್ಣ ಶಾಸಕರು ಮಾಯಕೊಂಡ. ಶ್ರೀ ಡಿ.ಜಿ ಶಾಂತನ ಗೌಡ್ರು ಮಾಜಿ ಶಾಸಕರು ಹೊನ್ನಾಳಿ. ಹಾಗೂ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಎಲ್ಲಾ ಸದಸ್ಯರುಗಳು ದಿನಾಂಕ :- 23-11-...

ಮನದ ಮುಸುಕು ಮಾಯಗೊಂಡಿವೆ ನಿನ್ನ ಪ್ರಸನ್ನ ಸಾನಿಧ್ಯದಿಂದ ಅಪ್ರತ್ಯಕ್ಷದ ಪರಭೌತಿಕ.ದಿವ್ಯ ಶಕ್ತಿಯು ಸೆಳೆಯುತ್ತಿದೆ. ಪರಮಮೌನದಿಂದ ಉತ್ಕೃಷ್ಟ ಶಾಂತಿ ರಸವು ಹೊಮ್ಮುತ್ತಿದೆ.ಆಶೀರ್ವದಿಸುವ ತೇಜೋಮಯ ದೃಷ್ಟಿ ಎನ್ನ ಅರಿವಿನ ಸೃಷ್ಟಿಕರ್ತನು ಕಾಣ ಅಮೃತೇಶ್ವರ 😑🙏🙇💐🌱🌷🌹

ಮನದ ಮುಸುಕು ಮಾಯಗೊಂಡಿವೆ ನಿನ್ನ ಪ್ರಸನ್ನ ಸಾನಿಧ್ಯದಿಂದ ಅಪ್ರತ್ಯಕ್ಷದ ಪರಭೌತಿಕ.ದಿವ್ಯ ಶಕ್ತಿಯು ಸೆಳೆಯುತ್ತಿದೆ. ಪರಮಮೌನದಿಂದ ಉತ್ಕೃಷ್ಟ ಶಾಂತಿ ರಸವು ಹೊಮ್ಮುತ್ತಿದೆ.ಆಶೀರ್ವದಿಸುವ ತೇಜೋಮಯ ದೃಷ್ಟಿ ಎನ್ನ ಅರಿವಿನ ಸೃಷ್ಟಿಕರ್ತನು ಕಾಣ ಅಮೃತೇಶ್ವರ 😑🙏🙇💐🌱🌷🌹

ಶ್ರೀಗಳವರು ಗದ್ದಿಗಸ್ಥರಾದ ಸ್ಥಳದಲ್ಲಿ ಅವರ ನೆನಪನ್ನು ಶಾಶ್ವತ ಗೊಳಿಸಲು ಭವ್ಯ ಗದ್ದಿಗೆಯ ಕಟ್ಟಡವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ.

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಠ  ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು ಬೃಹನ್ಮಠ ರಾಂಪುರ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ-577234  ಬಸವಾಪಟ್ಟಣ ಗವಿಮಠ ಗುಂಡೇರಿ ಶಿಲಾಮಠ ಸದ್ಭಕ್ತ ಮಹಾಶಯರೆ ರಾಂಪುರ ಹಾಲಸ್ವಾಮಿಗಳವರ ಮಠ ಪಂಚಪೀಠಗಳಲ್ಲಿ ಒಂದಾದ ಶ್ರೀ ಕಾಶಿ ಪೀಠದ ಶಾಖಾಮಠಗಳಲ್ಲಿ ಒಂದಾಗಿದ್ದು, ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಮಠವಾಗಿದೆ. ಶತಮಾನಗಳ ಇತಿಹಾಸ ಹೊಂದಿದ ಐದು ಗುರು ಪರಂಪರೆಗಳನ್ನೊಳಗೊಂಡ ತಲೆಮಾರುಗಳ ಗುರು ಲಕ್ಷಾಂತರ ಭಕ್ತರ ದುಃಖ ದುಮ್ಮಾನಗಳನ್ನು ಪರಿಹರಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದೆ. ಸಾವಿರಾರು ಭಕ್ತರು ನಿಯಮಿತವಾಗಿ ಆಮಾವಾಸ್ಯೆ, ಹುಣ್ಣಿಮೆಗಳಂದು ಮತ್ತು ಬಿಡುವಿನ ದಿನಗಳಲ್ಲಿ ಮಠಕ್ಕೆ ಆಗಮಿಸಿ, ಸ್ವಾಮಿಗಳವರ ದರ್ಶನ, ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಹಿಂದಿನ ಎಲ್ಲಾ ಗುರುವರ್ಯರು ಭಕ್ತರಿಗೆ ಆಶೀರ್ವಾದಗಳ ಜೊತೆಗೆ ಹಲವಾರು ರೋಗ-ರುಜಿನಗಳಿಗೆ ಆಯುರ್ವೇದದ ಔಷಧಗಳನ್ನು ನೀಡುತ್ತಾ, ಕೇವಲ ದೇಹದ ಖಾಯಿಲೆಗಳನ್ನಲ್ಲದೆ ಮನಸ್ಸಿನ ವ್ಯಾಧಿಗಳನ್ನೂ ದೂರಮಾಡಿದ್ದಾರೆ. ಬರುವ ಭಕ್ತರಿಗೆ ತೀರ್ಥ-ಪ್ರಸಾದಗಳ ಜೊತೆಗೆ ನಿರಂತರ ದಾಸೋಹ ವ್ಯವಸ್ಥೆಯೂ ಶ್ರೀ ಮಠದಲ್ಲಿದೆ. ಶ್ರೀಮಠದ ವತಿಯಿಂದ ವ್ಯವಸ್ಥಿತ ಗೋಶಾಲೆ ನಡೆಸಲ್ಪಡುತ್ತಿದ್ದು, ನೂರಾರು ಗೋವುಗಳ ಆಶ್ರಯ ತಾಣವಾಗಿದೆ. ಪ್ರತಿವರ್ಷ ರಥೋತ್ಸವ ನಡೆಯುತ್ತಿದ್ದು, 50 ಸಾವಿರಕ್ಕೂ ಮಿಕ್ಕಿ ಭಕ್...

ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಜಾತ್ರೆ ರದ್ದು

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯ ಸದ್ಗುರು ಶಿವಯೋಗಿ ಶ್ರೀಹಾಲಸ್ವಾಮಿಯ ಜಾತ್ರೆಯನ್ನು ಕೊಮಿಡ್ 19 ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶ್ರೀಮಠದ ಹಾಲ ವೀರಭದ್ರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣಹಾಲಸ್ವಾಮೀಜಿ ಮತ್ತು ಗ್ರಾಮದ ಸದ್ಭಕ್ತ ಮಂಡಳಿ ತಿಳಿಸಿದೆ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನ. 2,3,4ರಂದು ಮೂರು ದಿನಗಳ ಕಾಲ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಉತ್ಸವ , ರಥೋತ್ಸವ ಮತ್ತು ಕಡಿಮೆ ನ ಕಾಳಗ ಸೇರಿದಂತೆ ಸಂಭ್ರಮದ ಜಾತ್ರೆ ನಡೆಯಬೇಕಿತ್ತು. ಜಾತ್ರೆ ಸಂಭ್ರಮ ಸವಿಯಲು ಪ್ರತಿ ವರ್ಷವೂ ಸಾವಿರಾರು ಭಕ್ತರು ಸೇರುವ ನಿರೀಕ್ಷೆಯಿತ್ತು. ಆದರೆ ಮಹಾಮಾರಿ ಕರುನಾ ರೋಗ ಹರಡುವುದರಿಂದ ಸರ್ಕಾರದ ನಿಯಮಗಳನ್ವಯ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟದಾಯಕ ವಾಗಿದೆ ಆದರಿಂದ ಈ ವರ್ಷದ ಜಾತ್ರೆಯನ್ನು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೆ ಸಂದರ್ಭ ದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಜಾತ್ರೆಯ ಎಲ್ಲ ಧಾರ್ಮಿಕ ಆಚರಣೆಗಳನ್ನು ಶ್ರೀಮಠದ ಆವರಣದಲ್ಲೇ ಸಾಂಕೇತಿಕವಾಗಿ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಭಕ್ತರನ್ನು ನಿಷೇಧಿಸಲಾಗಿದೆ ಭಕ್ತರು ತಮ್ಮ ಮನೆಗಳಲ್ಲಿ ಅಂದು ಸದ್ಗುರು ಹಾಲಸ್ವಾಮಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸ್ಮರಣೆ ಮಾಡಿಕೊಳ್ಳಬೇಕು. ಜೊತೆಗೆ ಜಾತ್ರೆಯಲ್ಲಿ ಸ್ಟೇಶನರಿ, ಪಳಾರ ಇತರ ಯಾವುದೇ ಅಂಗಡಿಗ...

ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆಯಲ್ಲಿ ‘ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ಕುರಿತು ಸಿನಿಮಾ ಪೋಸ್ಟರ್ಗಳನ್ನು ಶುಕ್ರವಾರ ಅನಾವರಣಗೊಳಿಸುತ್ತಿರುವ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮತ್ತು ಚಿತ್ರ ತಂಡ.

ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆಯಲ್ಲಿ ‘ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ಕುರಿತು ಸಿನಿಮಾ ಪೋಸ್ಟರ್ಗಳನ್ನು ಶುಕ್ರವಾರ ಅನಾವರಣಗೊಳಿಸುತ್ತಿರುವ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮತ್ತು ಚಿತ್ರ ತಂಡ. ಮಧ್ಯ ಕರ್ನಾಟಕದ ಪುರಾಣ ಪ್ರಸಿದ್ದ ಸಿದ್ದಿ ಪುರುಷ ಪವಾಡ ಪುರುಷ , ಭಕ್ತರ ಆರಾಧ್ಯ ದೈವ ರಾಂಪುರ , ಬಸವಾಪಟ್ಟಣ , ಗುಂಡೇರಿ , ಹಿರಿಯೂರು ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ ‘ ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ  ’ ರುದ್ರ ಕಲ್ಲೊಡೆಯಾರ್ ಅವರ ನಿರ್ದೇಶನದಲ್ಲಿ ಅಕ್ಟೋಬರ್ 22 ರಂದು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ ದೊರಕಲಿದೆ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ  ಇತಿಹಾಸ , ಚರಿತ್ರೆ , ಭಕ್ತಿ ಪ್ರಧಾನ ಸಾರುವ ಚಿತ್ರಗಳು ಕಾಣುತ್ತಿದ್ದವು ಅದರೆ ಇತ್ತೀಚಿನ ದಿನಗಳಲ್ಲಿ ಕೇವಲ ಕಮರ್ಷಿಯಲ್ ಸಿನಿಮಾಗಳಿಗೆ ಸೀಮಿತವಾಗಿರುವ ದಿನಮಾನಗಳಲ್ಲಿ ಭಕ್ತಿ ಪ್ರಧಾನ ಒಳಗೊಂಡ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ.   ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರು ಈಗಲೂ ಸಕಲ ಸಂಕಷ್ಟಗಳನ್ನು ಭಕಾಧಿಗಳಿಗೆ ಪರಿಹರಿಸಿರುವ ಉದಾಹರಣೆಗಳಿ...

" ಅಮೃತೇಶ್ವರ ಹೃದಯ ಮಂದಿರ " ಕಟ್ಟಡದ ನಿರ್ಮಾಣದ ನಕ್ಷೆ

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷರಾದ ಭಕ್ತರ ಅಂತರಾತ್ಮದ ಒಡೆಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಭಗವತ್ಪಾದರ  ಕರ್ತೃ ಗದ್ದುಗೆಯ ಕಟ್ಟಡದ ನಿರ್ಮಾಣದ ನಕ್ಷೆ

ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ ಮಠದ ಭಕ್ತರ ಪೂರ್ವಭಾವಿ ಸಭೆ.

ವಿಕ ಸುದ್ದಿಲೋಕ  ನ್ಯಾಮತಿ ಃ  ಇತ್ತೀಚಿಗೆ ಲಿಂಗೈಕ್ಯರಾದ  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ  ಸೆಪ್ಟೆಂಬರ್ 20 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಂಪುರ ಕ್ಷೇತ್ರದ ಮಠದ ಆವರಣದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ನಾಡಿನ ಸರ್ವ ಭಕ್ತರ ಸಭೆಯನ್ನು ಕರೆಯಲಾಗಿದೆ ಎಂದು ಉಸ್ತುವರಿ ವಹಿಸಿರುವ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಶ್ರೀ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸರ್ವ ಭಕ್ತಾಧಿಗಳು ಮಾಸ್ಕ್ ಕಡ್ಡಾವಾಗಿ ಧರಿಸಿರಬೇಕು, ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದ್ದಾರೆ. ವರದಿಯ ಕೃಪೆ:- ಎಮ್.ಎಸ್ ಹೋಳೇಮಠ

SADHGURU SHIVAYOGI SRI HALASWAMY CHARITRE - KANNADA FILM (TRAILER) | ADH...

ಲಿಂಗೈಕ್ಯ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಜಿಗಳವರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ.

ಇಂದು ಸೋಮಿನಕೊಪ್ಪ ಗ್ರಾಮದಲ್ಲಿ ರಾಂಪುರ ಮಠದ ಲಿಂಗೈಕ್ಯ ಶ್ರೀಗಳಾದ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಜಿ ಗಳವರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಾಂತರ ಶಾಸಕರಾದ ಕೆ ಬಿ ಅಶೋಕ್ ನಾಯ್ಕ ರವರು ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಷಣ್ಮುಖಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಗುರುಪರಂಪರೆಯ ಪರಮರಾಧ್ಯಗುರುವರ್ಯರಾದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಮಹಾಸ್ವಾಮಿಗಳವರು ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ಗೋಚರಿಸಿದೆ .

ಮಾತು ಮೌನವಾಗಿದೆ, ಕಾರ್ಗತ್ತಲು ಆವರಿಸಿದೆ, ಮೌನ ಮತ್ತು ಕಾರ್ಗತ್ತಲೆಯ ಮಧ್ಯೆ ದುಃಖದ ಛಾಯೆ ಹೃದಯಕ್ಕೆ ನಾಟಿದೆ ಕಬ್ಬನ್ನು ಹಿಂಡಿದರೆ ಸಿಹಿಯನ್ನು ನೀಡುತ್ತದೆ, ಗಂಧದ ಕೊರಡನ್ನು ತೇರೆ ಸುವಾಸನೆಯನ್ನು ನೀಡುತ್ತದೆ ಇಡೀ ಜೀವನವನ್ನು ಭಕ್ತರ ಗೋಸ್ಕರ ತಮ್ಮ ಜೀವನವನ್ನು ಹಿಂಡಿ, ತೆಗೆದ ಸಮನ್ವಯಾಚಾರ್ಯ, ಸದ್ಭಕ್ತರ ಅಮೃತೇಶ್ವರ ಮಹಾ ಶಿವಯೋಗ ತಪೋನಿಧಿ, ತ್ರಿವಿಧ ದಾಸೋಹ ಮೂರ್ತಿಗಳಾದ, ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಗುರುಪರಂಪರೆಯ ಪರಮರಾಧ್ಯಗುರುವರ್ಯರಾದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಮಹಾಸ್ವಾಮಿಗಳವರು ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ಗೋಚರಿಸಿದೆ ನಾನು ಮತ್ತು ಭಕ್ತಕೋಟಿಗೆ ಸಹಿಸಿ ಕೊಳ್ಳಲಾಗದಷ್ಟು ದುಃಖವಾಗಿದೆ ಆ ಮಹಾ ಸನ್ನಿಧಿ ಭಗವಂತ ಕರ್ತೃ ಶ್ರೀ ಗುರು ಹಾಲೇಶ್ವರ ಅವರ ಪುಣ್ಯಾತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲೆಂದು || ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ

ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ .

ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ ಅಳವಂಡಿಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಾಗೂ ಹಿರೇಹಡಗಲಿ ಶ್ರೀಮಠದ ಶ್ರೀ ಸ.ಶಿ.ಹಾಲಸೋಮೇಶ್ವರ ಸ್ವಾಮಿಗಳು, ಶ್ರೀ ಸ.ಶಿ.ಹಾಲಸಿದ್ದೇಶ್ವರ ಸ್ವಾಮಿಗಳು,ಶ್ರೀ ಸ.ಶಿ.ಸಣ್ಣ ಹಾಲಸ್ವಾಮಿಜೀ ಹಾಗೂ ಶ್ರೀ ಉಮಪತಿ ಹಾಲಸ್ವಾಮಿಜೀಗಳಿಂದ  ದರ್ಶನವನ್ನು ಪಡೆದರು.🙏😭