ಮಾನಿಹಳ್ಳಿ ಪೂಜ್ಯರ ಹೃದಯಾಳದಿಂದ ಅರಳಿದ ಭಾವ ಕುಸುಮ
ಲೌಕಿಕ ಪಾರಮಾರ್ಧದ ಮುನಿಯೇ
ಹಿರೇಹಡಗಲಿ ಹಾಲೇಶ್ವರನೇ [ಫ]
ನಾಡಿನುದ್ದ ಅಗಲಕೂ ನೀನು
ಮಠವಕಟ್ಟಿ ದರ್ಮ ಇಟ್ಟೆ
ಬಾಲ ಪಥದಲ್ಲಿ ನೀನು
ಲೌಕಿಕನಿಗೆ ದಾರಿದೀಪ
ನಿನ್ನ ಬೆಳಕ ಹಾದಿಯಲ್ಲಿ
ಲೌಕಿಕನೆ ದಾರಿ ಹೋಕ
ಪಥಿಕನಾಗಿ ನೆಡೆದ ಲೌಕಿಕ
ಲೋಕದಲ್ಲಿ ಬೆಳಗಿ ನಿಂತ
ಅಪಾರ ಭಕ್ತ ಸಾಗರ ನಿಂದು
ಪಾರವೆ ಇಲ್ಲ ನಿನ್ನಯ ಮಹಿಮೆಗೆ
ನಾಶವಿಲ್ಲದ ಹಿರಿಮೆ ನಿಂದು
ಅವಿನಾಶದ ಕೊನೆಯು ನೀನು
ನನ್ನ ಮಹಿಮೆ ತಿಳಿದರೆ ಜಗದಿ
ಮಾನವ ಜಮ್ಮ ಸಾರ್ಥಕ ಭವಧಿ
ಷ//ಬ್ರ// ಶ್ರೀ ಮಳಿಯೋಗಿಶ್ವರ ಶಿವಚಾರ್ಯರು,
ಮಾನ್ವಿಹಳ್ಳಿ ಪುರವರ್ಗ ಮಠ
---------------------------------------------------------------------------------------------------
ಶ್ರೀ ಗವಿಸಿದ್ಧೇಶ್ವರಾಯ ನಮ:
ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಗವಿಮಠ, ಕೊಪ್ಪಳ
ಕೊಪ್ಪಳ-583231. ಜಿ: ಕೊಪ್ಪಳ ಕನರ್ಾಟಕ
website:-www.gavimathkoppal.com ಪೋನ : 08539 - 220212
"ಶ್ರೀಗಳ ನುಡಿ ನಮನ"
_____________
ಇಂದು ನಾವು 21 ನೇ ಶತಮಾನದಲ್ಲಿದ್ದೇವೆ. ನಿತ್ಯ-ನಿತ್ಯ ವಿಜ್ಞಾನದ ಹೊಸ-ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಈ ಹಿನ್ನಲೆಯಲ್ಲಿ ಸಮೂಹ ಮಾಧ್ಯಮ ಸಂಪರ್ಕ ಮಾಧ್ಯಮದಲ್ಲಿಯೂ ವಿಶೇಷ ಬೆಳವಣಿಗಳಗುತ್ತಿರುವನ್ನು ವೃತ್ತಪತ್ರಿಕೆ, ದೂರದರ್ಶನ ಇತ್ಯಾದಿಗಳಲ್ಲಿ ಕಾಣುತ್ತೇವೆ. ಹಾಗೆಯೇ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜಿ ಮಹಾಸಂಸ್ಥಾನ ಮಠದವರು ಜನಸಮುದಾಯವನ್ನು ನೇರವಾಗಿ ಹಾಗೂ ಸ್ವಲ್ಪೇ ಸಮಯದಲ್ಲಿಯು ಸಂಪಕರ್ಿಸಲು ಇಂತಹ ವೆಬ್ಸೆಟ್ನ್ನು ಆರಂಭಿಸಿರುವುದು ಅತ್ಯಂತ ಹರ್ಷದ ಸಂಗತಿಯಾಗಿದೆ.
ಸದ್ರಿ ವೆಬ್ಸೆಟ್ ಮೂಲಕ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜಿ ಮಹಾಸಂಸ್ಥಾನ ಮಠದವರು ದವರು ಅತ್ಯಂತ ವೈಚಾರಿಕ ಹಾಗೂ ಮಹತ್ವಪೂರ್ಣ ವಿಷಯಗಳನ್ನು ತಮ್ಮೂಲಕ ಪ್ರಸರಣಗೊಳಿಸಲಿ ಹಾಗೂ ವೆಬ್ಸೆಟ್ (www.halaswamy.com) ಮೂಲಕ ಪ್ರಪಂಚದಾದ್ಯಂತ ಇರುವ ಎಲ್ಲ ಜನ ಸಮೂಹಕ್ಕೂ ಒಳ್ಳೆಯ ಗುಣಮಟ್ಟದ ಧಾಮರ್ಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ವಿಷಯಗಳನ್ನು ಪ್ರಸರಣಗೊಳಿಸುತ್ತಾ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜಿ ಮಹಾಸಂಸ್ಥಾನ ಮಠದವರು ನೆರವೇರಿಸಲಿ ಎಂದು ಶುಭಕೋರುವೆವು.
ಶ್ರೀ ಮ.ನಿ.ಪ್ರ.ಜ ಗವಿಸಿದ್ಧೇಶ್ವರ ಮಹಾಸ್ವಾಮಿಗಳು
ಶ್ರೀ ಗವಿಮಠ, ಕೊಪ್ಪಳ.