ಬಳ್ಳಾರಿ ಜಿಲ್ಲಾ ಹೂವಿನ ಹಡಗಲಿ ತಾಲೂಕು
ಹಿರೇ ಹಡಗಲಿ ಗ್ರಾಮದಲ್ಲಿ ನಡೆದ ನಡೆದಾಡುವ ದೇವರ ಮಹಾ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ.
ಧಾರ್ಮಿಕ ಹಾಗೂ ಅನ್ನದಾಸೋಹಕ್ಕೆ ಹೆಸರಾದ ಪರಮಪೂಜ್ಯ ನೆಡದಾಡುವ ದೇವರು ಪಾವಡಪುರುಷ ತ್ರಿವಿಧ ದಾಸೋಹಿ ವಿಶ್ವರತ್ನ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಮ.ನಿ.ಪ್ರ.ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಇದರ ಅಂಗವಾಗಿ ಮುಂಜಾನೆ 9 ಗಂಟೆಗೆ ಶ್ರೀ ಬಳ್ಳಾರಿ ದುರ್ಗಾದೇವಿ ದೇವಾಲಯದಿಂದ ಶ್ರೀಗಳ ಭಾವಚಿತ್ರ ಮೆರವಣಿಗೆಯನ್ನು ಸಕಲ ವಾದ್ಯಗಳ ಮೂಲಕ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು ಹಾಗೂ ಕರಿ ಬಸವ ಹಾಲ ಸ್ವಾಮೀಜಿ ಮತ್ತು ಸಣ್ಣ ವೀರಪ್ಪಜ್ಜ ಸ್ವಾಮೀಜಿ ಇವರುಗಳ ನೇತೃತ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.🙏🙇🙏🌹🌺🌾🌼🌷
#Sri_siddaganga_matha #tumkur #Sri_shivakumara_mahaswamyji #hirehadagali #halaswamyji #mata
#Pune_smarani