Skip to main content

Posts

ಇಸ್ಲಾಂ ಶಾಂತಿಯುತ ಧರ್ಮ ಎಂದು ಬೊಬ್ಬೆ ಹೊಡೆದಿರಲ್ಲ ಇಂದು ಅಪಘಾನಿಸ್ತಾನ ಯಾವ ಹಂತದಲ್ಲಿದೆ ಎಂಬುದು ಹೇಳಬೇಕಿಲ್ಲ

ನಿಮ್ಮ ಪ್ರಕಾರ ಕಲ್ಲಿನ ವಿಗ್ರಹಕ್ಕೆ ಹಾಲೆರೆದರೆ ಅದು ತಪ್ಪು ಅನ್ನುವುದಾದರೆ, ನೀವು ಹುಟ್ಟಿನಿಂದ ಸಾಯುವವರೆಗೂ ನೀವು ಕುಡಿಯಲಿಕ್ಕೆ ಹಾಲು ಬೇಕು ಅಷ್ಟೇ ಏಕೆ ನಿಮ್ಮ ಹಣೆಯಲ್ಲಿ ವಿಭೂತಿ ಧರಿಸಲಿಕ್ಕೆ ಮತ್ತು ನೀವು ಪೂಜಿಸುವ ಲಿಂಗಕ್ಕೆ ವಿಭೂತಿ ಬೇಕು ಅದು ಸಿಗುವುದು ಗೋವಿನಿಂದ ಎಂಬುದು ನಿಮಗೆ ಅರಿವಿಗೆಬಾರದೆ ಗೋವಿನ ರಕ್ತ ರಸ್ತೆ ರಸ್ತೆಯಲ್ಲಿ ಹರಿಯುತ್ತಿದ್ದರೂ ಅದರ ರೋದನೆ ನಿಮಗೆ ಹೇಗೆ ಕೇಳಿಸುತ್ತದೆ ಹೇಳಿ. ಅದು ಹೋಗಲಿ ಇಸ್ಲಾಂ ಶಾಂತಿಯುತ ಧರ್ಮ ಎಂದು ಬೊಬ್ಬೆ ಹೊಡೆದಿರಲ್ಲ ಇಂದು ಅಪಘಾನಿಸ್ತಾನ ಯಾವ ಹಂತದಲ್ಲಿದೆ ಎಂಬುದು ಹೇಳಬೇಕಿಲ್ಲ, ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ವಿಷ ಬೀಜ ಬಿತ್ತುವ  ನೀವು ನಿಜನೀಚ ಹವಾಗುಣ ನಂದ ಅಲ್ಲವೇ😡 -ಅಮೃತೇಶ್ವರ ಶ್ರೀ  🙏🎉💐💯👍 ಹಾಲಸ್ವಾಮಿ ಮಠದ ಭಕ್ತರು यदि आपके पास पत्थर की मूर्ति है जो गलत है, तो आपको जन्म से मरते दम तक दूध पीना चाहिए।  इस्लाम शांतिप्रिय धर्म नहीं है, आज अफगानिस्तान क्या है, यह कहने की जरूरत नहीं है।  - अमृतेश्वर श्री  🙏🎉💐💯👍  हलस्वामी मठ के भक्त

ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಭಿರವನ್ನು ಏರ್ಪಡಿಸಲಾಗಿದೆ.

ಹೊನ್ನಾಳಿ ತಾಲೂಕಿನ ರಾಂಪುರ ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಗಸ್ಟ್ ೨ ರಂದು ಹೊನ್ನಾಳಿ ನಗರದ ನೂತನ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಭಿರವನ್ನು ಏರ್ಪಡಿಸಲಾಗಿದೆ  ,ಹಾಲಸ್ವಾಮೀಜಿಯವರ ಭಕ್ತರು,ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಭಿರ ನಡೆಯಲಿದೆ,ಇದೇ ವೇಳೆ ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಗುರುಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದ ಸಾನಿಧ್ಯವನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ  ,ಹೊಟ್ಯಾಪುರದ ಗಿರಿಸಿದ್ದೇಶ್ವರ ಶಿವಚಾರ್ಯ  ಸ್ವಾಮೀಜಿಯವರಹಾಗೂ ರಾಂಪುರ ಮಹಾಸಂಸ್ಥಾನದ ಶ್ರೀಗಳಾದ ಶಿವಕುಮಾರ ಹಾಲಸ್ವಾಮೀಜಿಯವರ ಉಪಸ್ಥಿತಿಯಲ್ಲಿ ರಕ್ತದಾನ ಶಿಭಿರ ಹಾಗೂ ಗುರುಸ್ಮರಣೆ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಭಕ್ತರು ಉಪಸ್ಥಿತರಿರುತ್ತಾರೆ ಎಂದರು. ಭಯ ಬೇಡ ; ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಎಂದು ಕೆಲವರಲ್ಲಿ ಗೊಂದಲ ಇದೆ, ಆದರೆ ವ್ಯಕ್ಸಿನ್ ಹಾಕಿಸಿಕೊಂಡ 14 ದಿನದ ನಂತರ ರಕ್ತದಾನ ಮಾಡಬಹುದು ಎಂದು ವಿವರಿಸಿದರು. ಹಾಲಸ್ವಾಮಿ ಮಠದ ಭಕ್ತರು

ಶ್ರೀ ಸದ್ಗುರು ಶಿವಯೋಗಿ ಹಾಲ ವೀರಪ್ಪಜ್ಜ ಮಹಾಸ್ವಾಮಿಗಳವರ ಮಹಾ ಪುಣ್ಯರಾಧನೆ

ಶ್ರೀಮದ್ ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಸಂಸ್ಥಾನ ಗುರುಪಾದ ದೇವರ ಮಠದ, ಶಿವಯೋಗ ತಪೋನಿಧಿ, ಸಮನ್ವಯಾಚಾರ್ಯ, ಭವರೋಗ ವೈದ್ಯರು, ಸದ್ಭಕ್ತರ ಅಮೃತೇಶ್ವರ ರು, ಜೀವೈಕ್ಕಾ ಸಮಾಧಿಸ್ತರಾದ ಶ್ರೀ ಸದ್ಗುರು ಶಿವಯೋಗಿ ಹಾಲ ವೀರಪ್ಪಜ್ಜ ಮಹಾಸ್ವಾಮಿಗಳವರ ಮಹಾ ಪುಣ್ಯರಾಧನೆ🙏🙏🙏🙏 ದಿನಾಂಕ:- 30-6-2021

ಶಿವಭಕ್ತಿ ಸಂಪನ್ನರಾದ ಮಾತೃಶ್ರೀ ರೇಣುಕಮ್ಮ ತಾಯಿಯವರ ನಾಲ್ಕನೇ ವರ್ಷದ ಮಹಾ ಪುಣ್ಯರಾಧನೆ.

ಅಪರೂಪದ ಪರಂಪರೆ ಅದ್ಭುತ ಆಚರಣೆ ಈ ಪರಂಪರೆಯು ಲೌಕಿಕ ಪಾರಮಾರ್ಥ ಗಳೆರಡರ ಬೆಸುಗೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ತುಂಬಿನ ಕೆರೆಯೂ ಒಂದು ಪುಟ್ಟ ಹಳ್ಳಿ. ಸಂಸ್ಕಾರ .ವೇದ. ವೈದ್ಯ ಜ್ಞಾನ ಗಳೆರಡೂ ನೆಲೆಗೊಂಡ ತುಂಬಿದ ಮನೆತನದ ಮಂಗಲ ಮೂರ್ತಿಯೆ ಶಿವ ಭಕ್ತಿ ಸಂಪನ್ನರಾದ ಶ್ರೀಮತಿ ಲಿಂಗೈಕ್ಯ ರೇಣುಕಮ್ಮನವರು.   ಶ್ರೀ ಡಾಕ್ಟರ್ ಲಿಂಗೈಕ್ಯ ನಾಗಬಸಯ್ಯ ನವರ ಶ್ರೀಮತಿ ಲಿಂಗೈಕ್ಯ ನೀಲಮ್ಮನವರ ಪುಣ್ಯ ಗರ್ಭದಲ್ಲಿ ಜನಿಸಿ .ಜಗತ್ತಿಗೆ ಧರ್ಮ. ಧಾರ್ಮಿಕತೆಯನ್ನು. ದಯೆಯನ್ನು ಸಮಾನತೆಯನ್ನು .ಬೋಧಿಸಿದ ಹಿರೇ ಹಡಗಲಿ ಹಾಲಸ್ವಾಮಿಗಳ ಪರಂಪರೆಯ ಶ್ರೀ ಲಿಂಗೈಕ್ಯ ಸದ್ಗುರು ಹಾಲಶಂಕರ ಹಾಲಸ್ವಾಮಿಗಳ ಲಿಂಗೈಕ್ಯ ಹಾಲಮ್ಮ ತಾಯಿ ಅವರ ಕೃಪಾ ಕರುಣಾ ದೃಷ್ಟಿಗೆ ಒಳಗಾಗಿ ಅವರ ಪ್ರೀತಿಯ ಮುದ್ದಿನ ಸೊಸೆಯಾದವರು .ಶ್ರೀಮಠದ ಹಿರಿಯ ಪರಮಪೂಜ್ಯ ಸದ್ಗುರು ಹಾಲವೀರಭದ್ರ ಸ್ವಾಮಿಗಳವರ ಜೊತೆಯಲ್ಲಿ 52 ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದವರು.ಸತಿ ಪತಿಗಳು ಒಂದಾದ ಭಕ್ತಿ ಹಿತ ವಪ್ಪುದು ಶಿವಂಗೆ ಎಂಬಂತೆ ಶ್ರೇಷ್ಠ ಸಂಸಾರವನ್ನು ನಡೆಸಿ ಹಾಲೇಶನ ಕೃಪೆಗೆ ಪಾತ್ರರಾದವರು . ಪಂಚ ಮಹಾ ತತ್ತ್ವಗಳಿಗೆ ಸಮ ಬರುವ ಪಂಚಪೀಠ ಚಾರ್ಯರ ಪರಂಪರೆಗಳ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು "ಪಂಚ ರತ್ನಗಳಿಗೆ "ಜನ್ಮ ನೀಡಿದವರು. ಪೃಥ್ವಿ ತತ್ತ್ವದ ಕರುಣೆ ಕಾಠಿಣ್ಯತೆ ಗಳಿಗೆ ಸ್ವರೂಪ ಎಂಬಂತೆ ಅಮ್ಮನ ಹಿರಿಯ ಸುಪುತ್ರಿ...

ವಿಶ್ವದಿಂದ ಕರೋನ ಮುಕ್ತಿಗಾಗಿ ಶ್ರೀ ಅಮೃತೇಶ್ವರ ಸ್ವಾಮೀಜಿಯವರ 21 ದಿನದ ಜಪಯಜ್ಞ ಇಂದು ಹೋಮದಲ್ಲಿ ಪೂರ್ಣಾಹುತಿ ನೀಡುವುದರ ಮುಖಾಂತರ ಪೂರ್ಣಗೊಂಡಿತು

ವಿಶ್ವದಿಂದ ಕರೋನ ಮುಕ್ತಿಗಾಗಿ ಶ್ರೀ ಅಮೃತೇಶ್ವರ ಸ್ವಾಮೀಜಿಯವರ 21 ದಿನದ ಜಪಯಜ್ಞ ಇಂದು ಹೋಮದಲ್ಲಿ ಪೂರ್ಣಾಹುತಿ ನೀಡುವುದರ ಮುಖಾಂತರ ದಿನಾಂಕ:29-05-2021 ಪೂರ್ಣಗೊಂಡಿತು. ಐತಿಹಾಸಿಕ ತಪೋಭೂಮಿ ಅನೇಕ ಮಹಾತ್ಮರು ಪಾದ ಸ್ಪರ್ಶಗೈದ ಪುಣ್ಯ ಭೂಮಿ  , ಜೊತೆಗೆ ಗುರುಸೇವೆ ಗೈದು ತಾವೆ ಗುರುವಾಗಿ ಮಹಾಯೋಗಿಗಳಾಗಿ ತಮ್ಮಗುರುಗಳ ಕಿರ್ತೀಯನ್ನು ನಾಡಿನುದ್ದಗಲಕ್ಕೂ ಪಸರಿಸಿ ಗುರುಗಳ ಸ್ವರೂಪದ ದ್ಯೋತಕವಾಗಿ  ಪವಾಡಪುರುಷ ಶ್ರೀ ಸದ್ಗರು ಶಿವಯೋಗಿ ರಾಂಪುರದ ಹಾಲಸ್ವಾಮಿಗಳ 250 ತೋರು ಗದ್ದುಗೆ ಶಾಖಮಠಗಳ ನಿರ್ಮಾಣ ಗೈದಂತ , ಹಠಯೋಗ ಸಿದ್ಧರು , ಮಹಾಮಹಿಮರು, ಶಿವಶರಣರು ,ಶಾಪನುಗ್ರಹ ಸಮರ್ಥರು , ಹಿರೇ ಹಡಗಲಿಯಲ್ಲಿ  ಜೀವಂತ ಸಮಾದಿಸ್ಥರಾದ ಸದ್ಗುರು ಶಿವಯೋಗಿ ಹಾಲವೀರಾರ್ಯ ಶಿವಯೋಗಿಗಳ ಸನ್ನಿಧಾನದಲ್ಲಿ ಲೋಕಕಲ್ಯಾಣಕ್ಕಾಗಿ  ಕರೋನ ನಿವಾರಣಾರ್ಥವಾಗಿ ಮತ್ತು ಶ್ರೀ ಅಮೃತೇಶ್ವರ ಶ್ರೀಗಳವರ ಒಂದು ಮಂಡಲ ಅನುಷ್ಠಾನ ಮುಕ್ತಾಯಕ್ಕಾಗಿ ಹಾಗೂ ಧನ್ವವಂತರಿ  ಹೋಮವನ್ನು ನಡೆಸಲಾಯಿತು.  ಸಾನಿಧ್ಯದಲ್ಲಿ  ಶ್ರೀಮಠದ ವೈಧ್ಯರತ್ನ ಆಯುರ್ವೇದ ಪಂಡಿತರಾದ ಸದ್ಗುರು ಶಿವಯೋಗಿ ಹಾಲಸೋಮೆಶ್ವರ ಶ್ರೀಗಳ ಹಾಗೂ  ಕೃಷಿಋಷಿ ಸದ್ಗುರು ಶಿವಯೋಗಿ  ಸಣ್ಣ ಹಾಲಸ್ವಾಮಿಗಳ ಹಾಗೂ ಶಿವಶರಣ ಹಾಲ ಅಭಿಷೇಕ ಶರಣರ ಮತ್ತು ಶ್ರೀ ವಿಶ್ವಪಂಡಿತಾರಾಧ್ಯ ಶ್ರೀಗಳ ಮತ್ತು ಪ್ರಕಾಶ ಶಾಸ್ತ್ರಿಗಳು ರಾಚಯ್ಯ ಶಾಸ್ತ್ರಿಗಳು ಇನ್ನಿತರ ಸದ್ಭಕ್ತರೊಂದಿಗೆ...

ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ|Sadguru Shivayogi Sri Haalaswami Charitre

You can also download this album from iTunes:        📂 Saavn :        📂 Gaana:         📂 Hungama : 📂 Wynk:           📂 Amazon:      📂 × Hungama Music - Songs & Videos Enjoy the latest songs and videos for FREE. Open in the Hungama Music app Open Sadguru Shivayogi Sri Haalaswami Charitre Sadguru Shivayogi Sri Haalaswami Charitre - Sachin S Nagartha Hi Guest LOGINREGISTER HOME MUSIC VIDEOS MOVIES PODCASTS ARTISTS TV SHOWS KIDS MUSIC TV SHORT FILMS PLANS NIGHT MODE OFF Hungama Songs Kannada Songs Sadguru Shivayogi Sri Haalaswami Charitre Songs Sadguru Shivayogi Sri Haalaswami Charitre 2021 | Kannada | 1 Songs Music Director - AT Ravish A2 MUSIC PLAY Sadguru Shivayogi Sri Haalaswami Charitre Songs Sadguru Shivayogi Sri Haalaswami Charitre Sachin S Nagartha... About Sadguru Shivayogi Sri Haalaswami Charitre Album Sadguru Shivayogi Sri Haalaswami Charitre MP3 Album Songs sun...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ಲಿಂಗೈಕ್ಯ ಶ್ರೀ ಷ. ಬ್ರ .ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮಿಗಳವರ ಕರ್ತೃಗದ್ದುಗೆಗೆ ಶಿಲಾನ್ಯಾಸ ಮತ್ತು ಶ್ರೀ ಹಾಲಸ್ವಾಮಿ ಗೋಶಾಲೆ ಲೋಕಾರ್ಪಣೆ.

ಶ್ರೀ ಹಾಲಸ್ವಾಮಿ ಬೃಹನ್ಮಠ ರಾಂಪುರ  ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು, ಗವಿಮಠ ಬಸವಪಟ್ಟಣ, ಶಿಲಾಮಠ ಗುಂಡೇರಿ, ಶಿಲಾಮಠ ಹಿರಿಯೂರು, ಲಿಂಗೈಕ್ಯ ಶ್ರೀ ಷ. ಬ್ರ .ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮಿಗಳವರ ಕರ್ತೃಗದ್ದುಗೆಗೆ ಶಿಲಾನ್ಯಾಸ ಮತ್ತು ಶ್ರೀ ಹಾಲಸ್ವಾಮಿ ಗೋಶಾಲೆ ಲೋಕಾರ್ಪಣೆ. ದಿವ್ಯಸಾನಿಧ್ಯ ಶ್ರೀ ಷ .ಬ್ರ ಡಾ.ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರು, ಹಿರೇಕಲ್ಮಠ ಹೊನ್ನಾಳಿ. ಶ್ರೀ ಷ ಬ್ರ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, ಹಿರೇಮಠ ಹೊಟ್ಟಾಪುರ. ಮುಖ್ಯ ಅತಿಥಿಗಳು  ಶ್ರೀ ಕೆ.ಎಸ್ ಈಶ್ವರಪ್ಪನವರು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು. ಶ್ರೀ ಜಿ.ಎಂ ಸಿದ್ದೇಶ್ವರ, ಮಾಜಿ ಕೇಂದ್ರ ಸಚಿವರು ಲೋಕಸಭಾ ಸದಸ್ಯರು ದಾವಣಗೆರೆ. ಶ್ರೀ ಬಿ.ವೈ ರಾಘವೇಂದ್ರ ಲೋಕಸಭಾ ಸದಸ್ಯರು ಶಿವಮೊಗ್ಗ . ಶ್ರೀ ಎಂ.ಪಿ ರೇಣುಕಾಚಾರ್ಯ ಶಾಸಕರು ಹೊನ್ನಾಳಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು. ಶ್ರೀ ಮಾಡಾಳು ವಿರುಪಾಕ್ಷಪ್ಪ ಶಾಸಕರು ಚನ್ನಗಿರಿ ಹಾಗೂ ಅಧ್ಯಕ್ಷರು ಕೆ ಎಸ್ ಡಿ ಎಲ್ ಶ್ರೀ ಕೆ. ಬಿ ಅಶೋಕ್ ನಾಯ್ಡು ಶಾಸಕರು ಶಿವಮೊಗ್ಗ ಗ್ರಾಮಂತರ. ಪ್ರೊ ಲಿಂಗಣ್ಣ ಶಾಸಕರು ಮಾಯಕೊಂಡ. ಶ್ರೀ ಡಿ.ಜಿ ಶಾಂತನ ಗೌಡ್ರು ಮಾಜಿ ಶಾಸಕರು ಹೊನ್ನಾಳಿ. ಹಾಗೂ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಎಲ್ಲಾ ಸದಸ್ಯರುಗಳು ದಿನಾಂಕ :- 23-11-...

ಮನದ ಮುಸುಕು ಮಾಯಗೊಂಡಿವೆ ನಿನ್ನ ಪ್ರಸನ್ನ ಸಾನಿಧ್ಯದಿಂದ ಅಪ್ರತ್ಯಕ್ಷದ ಪರಭೌತಿಕ.ದಿವ್ಯ ಶಕ್ತಿಯು ಸೆಳೆಯುತ್ತಿದೆ. ಪರಮಮೌನದಿಂದ ಉತ್ಕೃಷ್ಟ ಶಾಂತಿ ರಸವು ಹೊಮ್ಮುತ್ತಿದೆ.ಆಶೀರ್ವದಿಸುವ ತೇಜೋಮಯ ದೃಷ್ಟಿ ಎನ್ನ ಅರಿವಿನ ಸೃಷ್ಟಿಕರ್ತನು ಕಾಣ ಅಮೃತೇಶ್ವರ 😑🙏🙇💐🌱🌷🌹

ಮನದ ಮುಸುಕು ಮಾಯಗೊಂಡಿವೆ ನಿನ್ನ ಪ್ರಸನ್ನ ಸಾನಿಧ್ಯದಿಂದ ಅಪ್ರತ್ಯಕ್ಷದ ಪರಭೌತಿಕ.ದಿವ್ಯ ಶಕ್ತಿಯು ಸೆಳೆಯುತ್ತಿದೆ. ಪರಮಮೌನದಿಂದ ಉತ್ಕೃಷ್ಟ ಶಾಂತಿ ರಸವು ಹೊಮ್ಮುತ್ತಿದೆ.ಆಶೀರ್ವದಿಸುವ ತೇಜೋಮಯ ದೃಷ್ಟಿ ಎನ್ನ ಅರಿವಿನ ಸೃಷ್ಟಿಕರ್ತನು ಕಾಣ ಅಮೃತೇಶ್ವರ 😑🙏🙇💐🌱🌷🌹

ಶ್ರೀಗಳವರು ಗದ್ದಿಗಸ್ಥರಾದ ಸ್ಥಳದಲ್ಲಿ ಅವರ ನೆನಪನ್ನು ಶಾಶ್ವತ ಗೊಳಿಸಲು ಭವ್ಯ ಗದ್ದಿಗೆಯ ಕಟ್ಟಡವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ.

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಠ  ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು ಬೃಹನ್ಮಠ ರಾಂಪುರ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ-577234  ಬಸವಾಪಟ್ಟಣ ಗವಿಮಠ ಗುಂಡೇರಿ ಶಿಲಾಮಠ ಸದ್ಭಕ್ತ ಮಹಾಶಯರೆ ರಾಂಪುರ ಹಾಲಸ್ವಾಮಿಗಳವರ ಮಠ ಪಂಚಪೀಠಗಳಲ್ಲಿ ಒಂದಾದ ಶ್ರೀ ಕಾಶಿ ಪೀಠದ ಶಾಖಾಮಠಗಳಲ್ಲಿ ಒಂದಾಗಿದ್ದು, ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಮಠವಾಗಿದೆ. ಶತಮಾನಗಳ ಇತಿಹಾಸ ಹೊಂದಿದ ಐದು ಗುರು ಪರಂಪರೆಗಳನ್ನೊಳಗೊಂಡ ತಲೆಮಾರುಗಳ ಗುರು ಲಕ್ಷಾಂತರ ಭಕ್ತರ ದುಃಖ ದುಮ್ಮಾನಗಳನ್ನು ಪರಿಹರಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದೆ. ಸಾವಿರಾರು ಭಕ್ತರು ನಿಯಮಿತವಾಗಿ ಆಮಾವಾಸ್ಯೆ, ಹುಣ್ಣಿಮೆಗಳಂದು ಮತ್ತು ಬಿಡುವಿನ ದಿನಗಳಲ್ಲಿ ಮಠಕ್ಕೆ ಆಗಮಿಸಿ, ಸ್ವಾಮಿಗಳವರ ದರ್ಶನ, ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಹಿಂದಿನ ಎಲ್ಲಾ ಗುರುವರ್ಯರು ಭಕ್ತರಿಗೆ ಆಶೀರ್ವಾದಗಳ ಜೊತೆಗೆ ಹಲವಾರು ರೋಗ-ರುಜಿನಗಳಿಗೆ ಆಯುರ್ವೇದದ ಔಷಧಗಳನ್ನು ನೀಡುತ್ತಾ, ಕೇವಲ ದೇಹದ ಖಾಯಿಲೆಗಳನ್ನಲ್ಲದೆ ಮನಸ್ಸಿನ ವ್ಯಾಧಿಗಳನ್ನೂ ದೂರಮಾಡಿದ್ದಾರೆ. ಬರುವ ಭಕ್ತರಿಗೆ ತೀರ್ಥ-ಪ್ರಸಾದಗಳ ಜೊತೆಗೆ ನಿರಂತರ ದಾಸೋಹ ವ್ಯವಸ್ಥೆಯೂ ಶ್ರೀ ಮಠದಲ್ಲಿದೆ. ಶ್ರೀಮಠದ ವತಿಯಿಂದ ವ್ಯವಸ್ಥಿತ ಗೋಶಾಲೆ ನಡೆಸಲ್ಪಡುತ್ತಿದ್ದು, ನೂರಾರು ಗೋವುಗಳ ಆಶ್ರಯ ತಾಣವಾಗಿದೆ. ಪ್ರತಿವರ್ಷ ರಥೋತ್ಸವ ನಡೆಯುತ್ತಿದ್ದು, 50 ಸಾವಿರಕ್ಕೂ ಮಿಕ್ಕಿ ಭಕ್...

ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಜಾತ್ರೆ ರದ್ದು

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯ ಸದ್ಗುರು ಶಿವಯೋಗಿ ಶ್ರೀಹಾಲಸ್ವಾಮಿಯ ಜಾತ್ರೆಯನ್ನು ಕೊಮಿಡ್ 19 ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶ್ರೀಮಠದ ಹಾಲ ವೀರಭದ್ರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣಹಾಲಸ್ವಾಮೀಜಿ ಮತ್ತು ಗ್ರಾಮದ ಸದ್ಭಕ್ತ ಮಂಡಳಿ ತಿಳಿಸಿದೆ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನ. 2,3,4ರಂದು ಮೂರು ದಿನಗಳ ಕಾಲ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಉತ್ಸವ , ರಥೋತ್ಸವ ಮತ್ತು ಕಡಿಮೆ ನ ಕಾಳಗ ಸೇರಿದಂತೆ ಸಂಭ್ರಮದ ಜಾತ್ರೆ ನಡೆಯಬೇಕಿತ್ತು. ಜಾತ್ರೆ ಸಂಭ್ರಮ ಸವಿಯಲು ಪ್ರತಿ ವರ್ಷವೂ ಸಾವಿರಾರು ಭಕ್ತರು ಸೇರುವ ನಿರೀಕ್ಷೆಯಿತ್ತು. ಆದರೆ ಮಹಾಮಾರಿ ಕರುನಾ ರೋಗ ಹರಡುವುದರಿಂದ ಸರ್ಕಾರದ ನಿಯಮಗಳನ್ವಯ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟದಾಯಕ ವಾಗಿದೆ ಆದರಿಂದ ಈ ವರ್ಷದ ಜಾತ್ರೆಯನ್ನು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೆ ಸಂದರ್ಭ ದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಜಾತ್ರೆಯ ಎಲ್ಲ ಧಾರ್ಮಿಕ ಆಚರಣೆಗಳನ್ನು ಶ್ರೀಮಠದ ಆವರಣದಲ್ಲೇ ಸಾಂಕೇತಿಕವಾಗಿ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಭಕ್ತರನ್ನು ನಿಷೇಧಿಸಲಾಗಿದೆ ಭಕ್ತರು ತಮ್ಮ ಮನೆಗಳಲ್ಲಿ ಅಂದು ಸದ್ಗುರು ಹಾಲಸ್ವಾಮಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸ್ಮರಣೆ ಮಾಡಿಕೊಳ್ಳಬೇಕು. ಜೊತೆಗೆ ಜಾತ್ರೆಯಲ್ಲಿ ಸ್ಟೇಶನರಿ, ಪಳಾರ ಇತರ ಯಾವುದೇ ಅಂಗಡಿಗ...

ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆಯಲ್ಲಿ ‘ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ಕುರಿತು ಸಿನಿಮಾ ಪೋಸ್ಟರ್ಗಳನ್ನು ಶುಕ್ರವಾರ ಅನಾವರಣಗೊಳಿಸುತ್ತಿರುವ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮತ್ತು ಚಿತ್ರ ತಂಡ.

ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆಯಲ್ಲಿ ‘ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ಕುರಿತು ಸಿನಿಮಾ ಪೋಸ್ಟರ್ಗಳನ್ನು ಶುಕ್ರವಾರ ಅನಾವರಣಗೊಳಿಸುತ್ತಿರುವ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮತ್ತು ಚಿತ್ರ ತಂಡ. ಮಧ್ಯ ಕರ್ನಾಟಕದ ಪುರಾಣ ಪ್ರಸಿದ್ದ ಸಿದ್ದಿ ಪುರುಷ ಪವಾಡ ಪುರುಷ , ಭಕ್ತರ ಆರಾಧ್ಯ ದೈವ ರಾಂಪುರ , ಬಸವಾಪಟ್ಟಣ , ಗುಂಡೇರಿ , ಹಿರಿಯೂರು ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ ‘ ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ  ’ ರುದ್ರ ಕಲ್ಲೊಡೆಯಾರ್ ಅವರ ನಿರ್ದೇಶನದಲ್ಲಿ ಅಕ್ಟೋಬರ್ 22 ರಂದು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ ದೊರಕಲಿದೆ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ  ಇತಿಹಾಸ , ಚರಿತ್ರೆ , ಭಕ್ತಿ ಪ್ರಧಾನ ಸಾರುವ ಚಿತ್ರಗಳು ಕಾಣುತ್ತಿದ್ದವು ಅದರೆ ಇತ್ತೀಚಿನ ದಿನಗಳಲ್ಲಿ ಕೇವಲ ಕಮರ್ಷಿಯಲ್ ಸಿನಿಮಾಗಳಿಗೆ ಸೀಮಿತವಾಗಿರುವ ದಿನಮಾನಗಳಲ್ಲಿ ಭಕ್ತಿ ಪ್ರಧಾನ ಒಳಗೊಂಡ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ.   ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರು ಈಗಲೂ ಸಕಲ ಸಂಕಷ್ಟಗಳನ್ನು ಭಕಾಧಿಗಳಿಗೆ ಪರಿಹರಿಸಿರುವ ಉದಾಹರಣೆಗಳಿ...