Skip to main content

Posts

" ಅಮೃತೇಶ್ವರ ಹೃದಯ ಮಂದಿರ " ಕಟ್ಟಡದ ನಿರ್ಮಾಣದ ನಕ್ಷೆ

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷರಾದ ಭಕ್ತರ ಅಂತರಾತ್ಮದ ಒಡೆಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಭಗವತ್ಪಾದರ  ಕರ್ತೃ ಗದ್ದುಗೆಯ ಕಟ್ಟಡದ ನಿರ್ಮಾಣದ ನಕ್ಷೆ

ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ ಮಠದ ಭಕ್ತರ ಪೂರ್ವಭಾವಿ ಸಭೆ.

ವಿಕ ಸುದ್ದಿಲೋಕ  ನ್ಯಾಮತಿ ಃ  ಇತ್ತೀಚಿಗೆ ಲಿಂಗೈಕ್ಯರಾದ  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ  ಸೆಪ್ಟೆಂಬರ್ 20 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಂಪುರ ಕ್ಷೇತ್ರದ ಮಠದ ಆವರಣದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ನಾಡಿನ ಸರ್ವ ಭಕ್ತರ ಸಭೆಯನ್ನು ಕರೆಯಲಾಗಿದೆ ಎಂದು ಉಸ್ತುವರಿ ವಹಿಸಿರುವ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಶ್ರೀ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸರ್ವ ಭಕ್ತಾಧಿಗಳು ಮಾಸ್ಕ್ ಕಡ್ಡಾವಾಗಿ ಧರಿಸಿರಬೇಕು, ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದ್ದಾರೆ. ವರದಿಯ ಕೃಪೆ:- ಎಮ್.ಎಸ್ ಹೋಳೇಮಠ

SADHGURU SHIVAYOGI SRI HALASWAMY CHARITRE - KANNADA FILM (TRAILER) | ADH...

ಲಿಂಗೈಕ್ಯ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಜಿಗಳವರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ.

ಇಂದು ಸೋಮಿನಕೊಪ್ಪ ಗ್ರಾಮದಲ್ಲಿ ರಾಂಪುರ ಮಠದ ಲಿಂಗೈಕ್ಯ ಶ್ರೀಗಳಾದ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಜಿ ಗಳವರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಾಂತರ ಶಾಸಕರಾದ ಕೆ ಬಿ ಅಶೋಕ್ ನಾಯ್ಕ ರವರು ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಷಣ್ಮುಖಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಗುರುಪರಂಪರೆಯ ಪರಮರಾಧ್ಯಗುರುವರ್ಯರಾದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಮಹಾಸ್ವಾಮಿಗಳವರು ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ಗೋಚರಿಸಿದೆ .

ಮಾತು ಮೌನವಾಗಿದೆ, ಕಾರ್ಗತ್ತಲು ಆವರಿಸಿದೆ, ಮೌನ ಮತ್ತು ಕಾರ್ಗತ್ತಲೆಯ ಮಧ್ಯೆ ದುಃಖದ ಛಾಯೆ ಹೃದಯಕ್ಕೆ ನಾಟಿದೆ ಕಬ್ಬನ್ನು ಹಿಂಡಿದರೆ ಸಿಹಿಯನ್ನು ನೀಡುತ್ತದೆ, ಗಂಧದ ಕೊರಡನ್ನು ತೇರೆ ಸುವಾಸನೆಯನ್ನು ನೀಡುತ್ತದೆ ಇಡೀ ಜೀವನವನ್ನು ಭಕ್ತರ ಗೋಸ್ಕರ ತಮ್ಮ ಜೀವನವನ್ನು ಹಿಂಡಿ, ತೆಗೆದ ಸಮನ್ವಯಾಚಾರ್ಯ, ಸದ್ಭಕ್ತರ ಅಮೃತೇಶ್ವರ ಮಹಾ ಶಿವಯೋಗ ತಪೋನಿಧಿ, ತ್ರಿವಿಧ ದಾಸೋಹ ಮೂರ್ತಿಗಳಾದ, ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಗುರುಪರಂಪರೆಯ ಪರಮರಾಧ್ಯಗುರುವರ್ಯರಾದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಮಹಾಸ್ವಾಮಿಗಳವರು ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ಗೋಚರಿಸಿದೆ ನಾನು ಮತ್ತು ಭಕ್ತಕೋಟಿಗೆ ಸಹಿಸಿ ಕೊಳ್ಳಲಾಗದಷ್ಟು ದುಃಖವಾಗಿದೆ ಆ ಮಹಾ ಸನ್ನಿಧಿ ಭಗವಂತ ಕರ್ತೃ ಶ್ರೀ ಗುರು ಹಾಲೇಶ್ವರ ಅವರ ಪುಣ್ಯಾತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲೆಂದು || ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ

ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ .

ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ ಅಳವಂಡಿಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಾಗೂ ಹಿರೇಹಡಗಲಿ ಶ್ರೀಮಠದ ಶ್ರೀ ಸ.ಶಿ.ಹಾಲಸೋಮೇಶ್ವರ ಸ್ವಾಮಿಗಳು, ಶ್ರೀ ಸ.ಶಿ.ಹಾಲಸಿದ್ದೇಶ್ವರ ಸ್ವಾಮಿಗಳು,ಶ್ರೀ ಸ.ಶಿ.ಸಣ್ಣ ಹಾಲಸ್ವಾಮಿಜೀ ಹಾಗೂ ಶ್ರೀ ಉಮಪತಿ ಹಾಲಸ್ವಾಮಿಜೀಗಳಿಂದ  ದರ್ಶನವನ್ನು ಪಡೆದರು.🙏😭

ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ,

ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ,  ಗುರುವಿಲ್ಲದ ಗುರಿ ನೀರಿಲ್ಲದ ಬಾವಿ ಆದ್ಯಾತ್ಮವಿಲ್ಲದ ಜೀವನ ಮುಕ್ತಿ ದಾರಿ ತೋರಿಸುವ ಯನ್ನ ಮನದ ಒಡೆಯ ಭವರೋಗ ವೆದ್ಯ ನೆಡೆದಾಡುವ ದೇವರು ರಾಂಪುರ ಮಠದ ಪೀಠಾಧ್ಯಕ್ಷರು ಅದ ಲಿಂಗೈಕ್ಯ " ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು " ನಮ್ಮ ಮನೆಯ ಬೆಳಕು ನಿಮ್ಮ ಪಾದದ ಸೋಂಕಿದರೆ ಅ ಮನೆ  ಪಾವನ ನಿಜಕ್ಕೂ ನಿಮ್ಮ ಕೃಪೆಇಂದ ಎಷ್ಟೋ ಬಗೆ ಹರಿಯದ ಸಮಸ್ಯೆಗಳನ್ನು ನಿಮ್ಮ ಕೃಪೆಯೆಂದ ಬಗೆಹರಿಸಿ ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ, ಗುರುವು ಎಂದರೆ ಗೊತ್ತಿಲ್ಲದ ವಿಚಾರಗಳನ್ನು ಅರುವುದು ನಿಮ್ಮ ಬಳಿ ಎಂತಹ ಕಷ್ಟಗಳನ್ನು ತಂದರು ಅದಕ್ಕೆ ಒಂದು ಪರಿಹಾರ ಕೊಡುತ್ತಿದ್ದೀರಿ ಇನ್ನು ಯಾರ ಬಳಿ ಕೇಳಲಿ ಯಾರು ಪರಿಹರಿಸುವರು ಯನ್ನ ಕುಲದೊಡೆಯ ನಿಮ್ಮ ಪಾದಕೆ ಹಣೆ ಹಚ್ಚಿ ನಮಸ್ಕರಿಸಿದ ನಾವೇ ಧನ್ಯ ನೀವು ಕೊಟ್ಟ ಅ ಸಲಹೆ ಪರಿಹಾರಗಳು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಗುರುದೇವ ನಿಮ್ಮ ನಂಬಿ ಬಂದ ಭಕ್ತರನ್ನು ಎಂದು ಕೈ ಬಿಡಲಿಲ್ಲ ಜಾತಿ ಮತ ಕುಲಗಳನ್ನು ಮೀರಿಸಿದೆ ಎಲ್ಲರೂ ನಮ್ಮ ಭಕ್ತರು ಎಂದು ಕಾಪಾಡಿದೆ ನಿಮ್ಮ ಅಳಿವು ನಮಗೆ ಅಳಿಸಲಾಗದ ಅಚ್ಚು ಆಗಿ ಉಳಿದಿದೆ ನೀವು ಭಗವಂತನ ಸಾನಿಧ್ಯ ಸೇರಿದರು ನೀವು ಈ ನಾಡಿನ ಭಕ್ತರ ಹೃದಯ ಸಿಂಹಾಸನದಲ್ಲಿ ನೆಲೆಸಿರುವ ನಂಬಿಕೆ ನಿಮ್ಮ ಹೆಸರಿನಲ್ಲಿ ನಮ್ಮ ಕಾಯಕ  ನೆಡೆಯುತ್ತಿದೆ ನಿಮ್ಮ ಪವಾಡ ಎಂದೆಂದಿಗೂ ಅಜರಾಮರ ...

ಆಲೂರು ಗ್ರಾಮದಲ್ಲಿ ನಡೆದ ಶ್ರೀ ಲಿಂಗೈಕ್ಯ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಪುಣ್ಯಸ್ಮರಣೋತ್ಸವನ್ನು ಆಚರಿಸಲಾಯಿತು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದ ಶ್ರೀ ಲಿಂಗೈಕ್ಯ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಪುಣ್ಯಸ್ಮರಣೋತ್ಸವನ್ನು  ಆಲೂರು ಗ್ರಾಮಸ್ಥರು ವತಿಯಿಂದ ಪೂಜ್ಯ ಗುರುಗಳಿಗೆ ಭಕ್ತಿ ಸಮರ್ಪಣೆ ಗ್ರಾಮಸ್ಥರಿಂದ ಮಹಾಪ್ರಸಾದ ಏರ್ಪಡಿಸಲಾಗಿತ್ತು..🙏🙏🙏🙇 🌺🌺🌺

ಹಿರೇಹಡಗಲಿ ಶ್ರೀ ಹಾಲೇಶ್ವರ ಸಂಸ್ಥಾನ ಶ್ರೀ ಮಠದಲ್ಲಿ ನಡೆದ ಪರಮ ಗುರುವರ್ಯ ಶ್ರೀ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಮಹಾಸ್ವಾಮಿಗಳ ಅವರ ಪುಣ್ಯ ಆರಾಧನೆ

ಹಿರೇಹಡಗಲಿ ಶ್ರೀ ಹಾಲೇಶ್ವರ ಸಂಸ್ಥಾನ ಶ್ರೀ ಮಠದಲ್ಲಿ ನಡೆದ ಪರಮ ಗುರುವರ್ಯ ಶ್ರೀ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಮಹಾಸ್ವಾಮಿಗಳ ಅವರ ಪುಣ್ಯ ಆರಾಧನೆ

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ...ಬೀಳದಂತೆ ಎಚ್ಚರಿಕೆ ವಹಿಸಬೇಕು.

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ... ಬೀಳದಂತೆ ಎಚ್ಚರಿಕೆ ವಹಿಸಬೇಕು. ಗುರು ಅಂದರೆ ಏನಯ್ಯ .... ಅದು ಬಹಳ ದೊಡ್ಡದು .ಗುರು ಸಿಗೋದು ಬಹಳಾ ದುರ್ಲಭ. ಸಿಕ್ಕಾಗ ಸಾಧನೆ ಮಾಡಬೇಕು. ಗುರು ಶರೀರದಲ್ಲಿ ಇದ್ದಾಗ್ಲೆ , ನಿಮಗೆ ಸಿಕ್ಕಾಗ ಸಾಧನೆ ಮಾಡಬೇಕು. ಈಗ ಸುಲಭ . ✍️ ಮೌನ ಋಷಿ 

ಹಾವೇರಿ ಜಿಲ್ಲೆಯ ಹನುಮನಹಳ್ಳಿ ಗ್ರಾಮದ ಭಕ್ತರಿಂದ ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಸಾ॥ಹನುಮನಹಳ್ಳಿ   ಶ್ರೀ ಹಾಲೇಶ್ವರ ಮಠದ ಪರಮಪೂಜ್ಯ  ಶ್ರೀಗಳು ಹಾಗೂ ಸಕಲ ಮತದ ಸದ್ಭಕ್ತರಿಂದ ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ  ಶ್ರೀ  ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ  ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ  ಸಲ್ಲಿಸಿದ್ದರು. ಓಂ ಶಾಂತಿ ಓಂ ಶಾಂತಿ ಶ್ರೀ ಅಭಿನಂದ ಹಾಲಸ್ವಾಮಿಜೀ ಧರ್ಮಧರ್ಶಿಗಳು 

ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಸಾ॥ಹಿರೇಹಡಗಲಿ ಹಿರೇಹಡಗಲಿ ಶ್ರೀ ಹಾಲೇಶ್ವರ ಮಠದ ಪರಮಪೂಜ್ಯ  ಶ್ರೀಗಳು ಹಾಗೂ ಸಕಲ ಮತದ ಸದ್ಭಕ್ತರಿಂದ ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ  ಶ್ರೀ  ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ  ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ  ಸಲ್ಲಿಸಿದ್ದರು. ಓಂ ಶಾಂತಿ ಓಂ ಶಾಂತಿ