ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯ ಸದ್ಗುರು ಶಿವಯೋಗಿ ಶ್ರೀಹಾಲಸ್ವಾಮಿಯ ಜಾತ್ರೆಯನ್ನು ಕೊಮಿಡ್ 19 ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶ್ರೀಮಠದ ಹಾಲ ವೀರಭದ್ರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣಹಾಲಸ್ವಾಮೀಜಿ ಮತ್ತು ಗ್ರಾಮದ ಸದ್ಭಕ್ತ ಮಂಡಳಿ ತಿಳಿಸಿದೆ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನ. 2,3,4ರಂದು ಮೂರು ದಿನಗಳ ಕಾಲ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಉತ್ಸವ , ರಥೋತ್ಸವ ಮತ್ತು ಕಡಿಮೆ ನ ಕಾಳಗ ಸೇರಿದಂತೆ ಸಂಭ್ರಮದ ಜಾತ್ರೆ ನಡೆಯಬೇಕಿತ್ತು. ಜಾತ್ರೆ ಸಂಭ್ರಮ ಸವಿಯಲು ಪ್ರತಿ ವರ್ಷವೂ ಸಾವಿರಾರು ಭಕ್ತರು ಸೇರುವ ನಿರೀಕ್ಷೆಯಿತ್ತು. ಆದರೆ ಮಹಾಮಾರಿ ಕರುನಾ ರೋಗ ಹರಡುವುದರಿಂದ ಸರ್ಕಾರದ ನಿಯಮಗಳನ್ವಯ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟದಾಯಕ ವಾಗಿದೆ ಆದರಿಂದ ಈ ವರ್ಷದ ಜಾತ್ರೆಯನ್ನು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೆ ಸಂದರ್ಭ ದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಜಾತ್ರೆಯ ಎಲ್ಲ ಧಾರ್ಮಿಕ ಆಚರಣೆಗಳನ್ನು ಶ್ರೀಮಠದ ಆವರಣದಲ್ಲೇ ಸಾಂಕೇತಿಕವಾಗಿ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಭಕ್ತರನ್ನು ನಿಷೇಧಿಸಲಾಗಿದೆ ಭಕ್ತರು ತಮ್ಮ ಮನೆಗಳಲ್ಲಿ ಅಂದು ಸದ್ಗುರು ಹಾಲಸ್ವಾಮಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸ್ಮರಣೆ ಮಾಡಿಕೊಳ್ಳಬೇಕು. ಜೊತೆಗೆ ಜಾತ್ರೆಯಲ್ಲಿ ಸ್ಟೇಶನರಿ, ಪಳಾರ ಇತರ ಯಾವುದೇ ಅಂಗಡಿಗ...
Sri Sadguru Shivayogi Halaswamy Samsathna Math Hirehadagali