Skip to main content

Posts

ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಜಾತ್ರೆ ರದ್ದು

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯ ಸದ್ಗುರು ಶಿವಯೋಗಿ ಶ್ರೀಹಾಲಸ್ವಾಮಿಯ ಜಾತ್ರೆಯನ್ನು ಕೊಮಿಡ್ 19 ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶ್ರೀಮಠದ ಹಾಲ ವೀರಭದ್ರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣಹಾಲಸ್ವಾಮೀಜಿ ಮತ್ತು ಗ್ರಾಮದ ಸದ್ಭಕ್ತ ಮಂಡಳಿ ತಿಳಿಸಿದೆ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನ. 2,3,4ರಂದು ಮೂರು ದಿನಗಳ ಕಾಲ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಉತ್ಸವ , ರಥೋತ್ಸವ ಮತ್ತು ಕಡಿಮೆ ನ ಕಾಳಗ ಸೇರಿದಂತೆ ಸಂಭ್ರಮದ ಜಾತ್ರೆ ನಡೆಯಬೇಕಿತ್ತು. ಜಾತ್ರೆ ಸಂಭ್ರಮ ಸವಿಯಲು ಪ್ರತಿ ವರ್ಷವೂ ಸಾವಿರಾರು ಭಕ್ತರು ಸೇರುವ ನಿರೀಕ್ಷೆಯಿತ್ತು. ಆದರೆ ಮಹಾಮಾರಿ ಕರುನಾ ರೋಗ ಹರಡುವುದರಿಂದ ಸರ್ಕಾರದ ನಿಯಮಗಳನ್ವಯ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟದಾಯಕ ವಾಗಿದೆ ಆದರಿಂದ ಈ ವರ್ಷದ ಜಾತ್ರೆಯನ್ನು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೆ ಸಂದರ್ಭ ದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಜಾತ್ರೆಯ ಎಲ್ಲ ಧಾರ್ಮಿಕ ಆಚರಣೆಗಳನ್ನು ಶ್ರೀಮಠದ ಆವರಣದಲ್ಲೇ ಸಾಂಕೇತಿಕವಾಗಿ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಭಕ್ತರನ್ನು ನಿಷೇಧಿಸಲಾಗಿದೆ ಭಕ್ತರು ತಮ್ಮ ಮನೆಗಳಲ್ಲಿ ಅಂದು ಸದ್ಗುರು ಹಾಲಸ್ವಾಮಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸ್ಮರಣೆ ಮಾಡಿಕೊಳ್ಳಬೇಕು. ಜೊತೆಗೆ ಜಾತ್ರೆಯಲ್ಲಿ ಸ್ಟೇಶನರಿ, ಪಳಾರ ಇತರ ಯಾವುದೇ ಅಂಗಡಿಗ...

ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆಯಲ್ಲಿ ‘ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ಕುರಿತು ಸಿನಿಮಾ ಪೋಸ್ಟರ್ಗಳನ್ನು ಶುಕ್ರವಾರ ಅನಾವರಣಗೊಳಿಸುತ್ತಿರುವ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮತ್ತು ಚಿತ್ರ ತಂಡ.

ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆಯಲ್ಲಿ ‘ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ಕುರಿತು ಸಿನಿಮಾ ಪೋಸ್ಟರ್ಗಳನ್ನು ಶುಕ್ರವಾರ ಅನಾವರಣಗೊಳಿಸುತ್ತಿರುವ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮತ್ತು ಚಿತ್ರ ತಂಡ. ಮಧ್ಯ ಕರ್ನಾಟಕದ ಪುರಾಣ ಪ್ರಸಿದ್ದ ಸಿದ್ದಿ ಪುರುಷ ಪವಾಡ ಪುರುಷ , ಭಕ್ತರ ಆರಾಧ್ಯ ದೈವ ರಾಂಪುರ , ಬಸವಾಪಟ್ಟಣ , ಗುಂಡೇರಿ , ಹಿರಿಯೂರು ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ ‘ ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ  ’ ರುದ್ರ ಕಲ್ಲೊಡೆಯಾರ್ ಅವರ ನಿರ್ದೇಶನದಲ್ಲಿ ಅಕ್ಟೋಬರ್ 22 ರಂದು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ ದೊರಕಲಿದೆ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ  ಇತಿಹಾಸ , ಚರಿತ್ರೆ , ಭಕ್ತಿ ಪ್ರಧಾನ ಸಾರುವ ಚಿತ್ರಗಳು ಕಾಣುತ್ತಿದ್ದವು ಅದರೆ ಇತ್ತೀಚಿನ ದಿನಗಳಲ್ಲಿ ಕೇವಲ ಕಮರ್ಷಿಯಲ್ ಸಿನಿಮಾಗಳಿಗೆ ಸೀಮಿತವಾಗಿರುವ ದಿನಮಾನಗಳಲ್ಲಿ ಭಕ್ತಿ ಪ್ರಧಾನ ಒಳಗೊಂಡ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ.   ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರು ಈಗಲೂ ಸಕಲ ಸಂಕಷ್ಟಗಳನ್ನು ಭಕಾಧಿಗಳಿಗೆ ಪರಿಹರಿಸಿರುವ ಉದಾಹರಣೆಗಳಿ...

" ಅಮೃತೇಶ್ವರ ಹೃದಯ ಮಂದಿರ " ಕಟ್ಟಡದ ನಿರ್ಮಾಣದ ನಕ್ಷೆ

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷರಾದ ಭಕ್ತರ ಅಂತರಾತ್ಮದ ಒಡೆಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಭಗವತ್ಪಾದರ  ಕರ್ತೃ ಗದ್ದುಗೆಯ ಕಟ್ಟಡದ ನಿರ್ಮಾಣದ ನಕ್ಷೆ

ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ ಮಠದ ಭಕ್ತರ ಪೂರ್ವಭಾವಿ ಸಭೆ.

ವಿಕ ಸುದ್ದಿಲೋಕ  ನ್ಯಾಮತಿ ಃ  ಇತ್ತೀಚಿಗೆ ಲಿಂಗೈಕ್ಯರಾದ  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ  ಸೆಪ್ಟೆಂಬರ್ 20 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಂಪುರ ಕ್ಷೇತ್ರದ ಮಠದ ಆವರಣದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ನಾಡಿನ ಸರ್ವ ಭಕ್ತರ ಸಭೆಯನ್ನು ಕರೆಯಲಾಗಿದೆ ಎಂದು ಉಸ್ತುವರಿ ವಹಿಸಿರುವ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಶ್ರೀ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸರ್ವ ಭಕ್ತಾಧಿಗಳು ಮಾಸ್ಕ್ ಕಡ್ಡಾವಾಗಿ ಧರಿಸಿರಬೇಕು, ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದ್ದಾರೆ. ವರದಿಯ ಕೃಪೆ:- ಎಮ್.ಎಸ್ ಹೋಳೇಮಠ

SADHGURU SHIVAYOGI SRI HALASWAMY CHARITRE - KANNADA FILM (TRAILER) | ADH...

ಲಿಂಗೈಕ್ಯ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಜಿಗಳವರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ.

ಇಂದು ಸೋಮಿನಕೊಪ್ಪ ಗ್ರಾಮದಲ್ಲಿ ರಾಂಪುರ ಮಠದ ಲಿಂಗೈಕ್ಯ ಶ್ರೀಗಳಾದ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಜಿ ಗಳವರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಾಂತರ ಶಾಸಕರಾದ ಕೆ ಬಿ ಅಶೋಕ್ ನಾಯ್ಕ ರವರು ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಷಣ್ಮುಖಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಗುರುಪರಂಪರೆಯ ಪರಮರಾಧ್ಯಗುರುವರ್ಯರಾದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಮಹಾಸ್ವಾಮಿಗಳವರು ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ಗೋಚರಿಸಿದೆ .

ಮಾತು ಮೌನವಾಗಿದೆ, ಕಾರ್ಗತ್ತಲು ಆವರಿಸಿದೆ, ಮೌನ ಮತ್ತು ಕಾರ್ಗತ್ತಲೆಯ ಮಧ್ಯೆ ದುಃಖದ ಛಾಯೆ ಹೃದಯಕ್ಕೆ ನಾಟಿದೆ ಕಬ್ಬನ್ನು ಹಿಂಡಿದರೆ ಸಿಹಿಯನ್ನು ನೀಡುತ್ತದೆ, ಗಂಧದ ಕೊರಡನ್ನು ತೇರೆ ಸುವಾಸನೆಯನ್ನು ನೀಡುತ್ತದೆ ಇಡೀ ಜೀವನವನ್ನು ಭಕ್ತರ ಗೋಸ್ಕರ ತಮ್ಮ ಜೀವನವನ್ನು ಹಿಂಡಿ, ತೆಗೆದ ಸಮನ್ವಯಾಚಾರ್ಯ, ಸದ್ಭಕ್ತರ ಅಮೃತೇಶ್ವರ ಮಹಾ ಶಿವಯೋಗ ತಪೋನಿಧಿ, ತ್ರಿವಿಧ ದಾಸೋಹ ಮೂರ್ತಿಗಳಾದ, ಹಿರೇಹಡಗಲಿ ಶ್ರೀ ಸದ್ಗುರು ಶಿವಯೋಗಿ ಹಾಲ ಸ್ವಾಮೀಜಿ ಗುರುಪರಂಪರೆಯ ಪರಮರಾಧ್ಯಗುರುವರ್ಯರಾದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಮಹಾಸ್ವಾಮಿಗಳವರು ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ಗೋಚರಿಸಿದೆ ನಾನು ಮತ್ತು ಭಕ್ತಕೋಟಿಗೆ ಸಹಿಸಿ ಕೊಳ್ಳಲಾಗದಷ್ಟು ದುಃಖವಾಗಿದೆ ಆ ಮಹಾ ಸನ್ನಿಧಿ ಭಗವಂತ ಕರ್ತೃ ಶ್ರೀ ಗುರು ಹಾಲೇಶ್ವರ ಅವರ ಪುಣ್ಯಾತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲೆಂದು || ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ

ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ .

ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ ಅಳವಂಡಿಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಾಗೂ ಹಿರೇಹಡಗಲಿ ಶ್ರೀಮಠದ ಶ್ರೀ ಸ.ಶಿ.ಹಾಲಸೋಮೇಶ್ವರ ಸ್ವಾಮಿಗಳು, ಶ್ರೀ ಸ.ಶಿ.ಹಾಲಸಿದ್ದೇಶ್ವರ ಸ್ವಾಮಿಗಳು,ಶ್ರೀ ಸ.ಶಿ.ಸಣ್ಣ ಹಾಲಸ್ವಾಮಿಜೀ ಹಾಗೂ ಶ್ರೀ ಉಮಪತಿ ಹಾಲಸ್ವಾಮಿಜೀಗಳಿಂದ  ದರ್ಶನವನ್ನು ಪಡೆದರು.🙏😭

ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ,

ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ,  ಗುರುವಿಲ್ಲದ ಗುರಿ ನೀರಿಲ್ಲದ ಬಾವಿ ಆದ್ಯಾತ್ಮವಿಲ್ಲದ ಜೀವನ ಮುಕ್ತಿ ದಾರಿ ತೋರಿಸುವ ಯನ್ನ ಮನದ ಒಡೆಯ ಭವರೋಗ ವೆದ್ಯ ನೆಡೆದಾಡುವ ದೇವರು ರಾಂಪುರ ಮಠದ ಪೀಠಾಧ್ಯಕ್ಷರು ಅದ ಲಿಂಗೈಕ್ಯ " ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು " ನಮ್ಮ ಮನೆಯ ಬೆಳಕು ನಿಮ್ಮ ಪಾದದ ಸೋಂಕಿದರೆ ಅ ಮನೆ  ಪಾವನ ನಿಜಕ್ಕೂ ನಿಮ್ಮ ಕೃಪೆಇಂದ ಎಷ್ಟೋ ಬಗೆ ಹರಿಯದ ಸಮಸ್ಯೆಗಳನ್ನು ನಿಮ್ಮ ಕೃಪೆಯೆಂದ ಬಗೆಹರಿಸಿ ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ, ಗುರುವು ಎಂದರೆ ಗೊತ್ತಿಲ್ಲದ ವಿಚಾರಗಳನ್ನು ಅರುವುದು ನಿಮ್ಮ ಬಳಿ ಎಂತಹ ಕಷ್ಟಗಳನ್ನು ತಂದರು ಅದಕ್ಕೆ ಒಂದು ಪರಿಹಾರ ಕೊಡುತ್ತಿದ್ದೀರಿ ಇನ್ನು ಯಾರ ಬಳಿ ಕೇಳಲಿ ಯಾರು ಪರಿಹರಿಸುವರು ಯನ್ನ ಕುಲದೊಡೆಯ ನಿಮ್ಮ ಪಾದಕೆ ಹಣೆ ಹಚ್ಚಿ ನಮಸ್ಕರಿಸಿದ ನಾವೇ ಧನ್ಯ ನೀವು ಕೊಟ್ಟ ಅ ಸಲಹೆ ಪರಿಹಾರಗಳು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಗುರುದೇವ ನಿಮ್ಮ ನಂಬಿ ಬಂದ ಭಕ್ತರನ್ನು ಎಂದು ಕೈ ಬಿಡಲಿಲ್ಲ ಜಾತಿ ಮತ ಕುಲಗಳನ್ನು ಮೀರಿಸಿದೆ ಎಲ್ಲರೂ ನಮ್ಮ ಭಕ್ತರು ಎಂದು ಕಾಪಾಡಿದೆ ನಿಮ್ಮ ಅಳಿವು ನಮಗೆ ಅಳಿಸಲಾಗದ ಅಚ್ಚು ಆಗಿ ಉಳಿದಿದೆ ನೀವು ಭಗವಂತನ ಸಾನಿಧ್ಯ ಸೇರಿದರು ನೀವು ಈ ನಾಡಿನ ಭಕ್ತರ ಹೃದಯ ಸಿಂಹಾಸನದಲ್ಲಿ ನೆಲೆಸಿರುವ ನಂಬಿಕೆ ನಿಮ್ಮ ಹೆಸರಿನಲ್ಲಿ ನಮ್ಮ ಕಾಯಕ  ನೆಡೆಯುತ್ತಿದೆ ನಿಮ್ಮ ಪವಾಡ ಎಂದೆಂದಿಗೂ ಅಜರಾಮರ ...

ಆಲೂರು ಗ್ರಾಮದಲ್ಲಿ ನಡೆದ ಶ್ರೀ ಲಿಂಗೈಕ್ಯ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಪುಣ್ಯಸ್ಮರಣೋತ್ಸವನ್ನು ಆಚರಿಸಲಾಯಿತು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದ ಶ್ರೀ ಲಿಂಗೈಕ್ಯ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಪುಣ್ಯಸ್ಮರಣೋತ್ಸವನ್ನು  ಆಲೂರು ಗ್ರಾಮಸ್ಥರು ವತಿಯಿಂದ ಪೂಜ್ಯ ಗುರುಗಳಿಗೆ ಭಕ್ತಿ ಸಮರ್ಪಣೆ ಗ್ರಾಮಸ್ಥರಿಂದ ಮಹಾಪ್ರಸಾದ ಏರ್ಪಡಿಸಲಾಗಿತ್ತು..🙏🙏🙏🙇 🌺🌺🌺

ಹಿರೇಹಡಗಲಿ ಶ್ರೀ ಹಾಲೇಶ್ವರ ಸಂಸ್ಥಾನ ಶ್ರೀ ಮಠದಲ್ಲಿ ನಡೆದ ಪರಮ ಗುರುವರ್ಯ ಶ್ರೀ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಮಹಾಸ್ವಾಮಿಗಳ ಅವರ ಪುಣ್ಯ ಆರಾಧನೆ

ಹಿರೇಹಡಗಲಿ ಶ್ರೀ ಹಾಲೇಶ್ವರ ಸಂಸ್ಥಾನ ಶ್ರೀ ಮಠದಲ್ಲಿ ನಡೆದ ಪರಮ ಗುರುವರ್ಯ ಶ್ರೀ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಮಹಾಸ್ವಾಮಿಗಳ ಅವರ ಪುಣ್ಯ ಆರಾಧನೆ

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ...ಬೀಳದಂತೆ ಎಚ್ಚರಿಕೆ ವಹಿಸಬೇಕು.

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ... ಬೀಳದಂತೆ ಎಚ್ಚರಿಕೆ ವಹಿಸಬೇಕು. ಗುರು ಅಂದರೆ ಏನಯ್ಯ .... ಅದು ಬಹಳ ದೊಡ್ಡದು .ಗುರು ಸಿಗೋದು ಬಹಳಾ ದುರ್ಲಭ. ಸಿಕ್ಕಾಗ ಸಾಧನೆ ಮಾಡಬೇಕು. ಗುರು ಶರೀರದಲ್ಲಿ ಇದ್ದಾಗ್ಲೆ , ನಿಮಗೆ ಸಿಕ್ಕಾಗ ಸಾಧನೆ ಮಾಡಬೇಕು. ಈಗ ಸುಲಭ . ✍️ ಮೌನ ಋಷಿ