ಮುಖಪುಟ
>> ಜಿಲ್ಲೆ
>> ಗದಗ
Published: 09 Apr 2013 10:45 AM IS
http://kannadaprabha.com
*ಡೋಣಿ: ಇಂದಿನಿಂದ ಜಾತ್ರೆ
ಗದಗ: *ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಪುರಾತನ ಹಾಗೂ ಪವಾಡ ಪ್ರಸಿದ್ಧಿಯ ಹಾಲಸೋಮೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಏ. 9 ರಿಂದ 14ರ ವರೆಗೆ ನಡೆಯಲಿವೆ. ಏ. 9 ರಂದು ಮಧ್ಯಾಹ್ನ 3 ಗಂಟೆಗೆ ಉಜ್ಜಯನಿಯ ಜ. ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರುವುದು. ಕುಂಭಮೇಳವೂ ಜರುಗಲಿದ್ದು, ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿ, ನಂತರ ಕಳಸಾರೋಹಣ ಹಾಗೂ ಧರ್ಮಸಭೆ ನಡೆಯಲಿದೆ. ಏ. 10 ರಂದು ರಾತ್ರಿ 8 ಗಂಟೆಗೆ ಹಾಲೇಶ್ವರರು ಆಗಮಿಸುವರು. ಏ. 11ರ ಬೆಳಗ್ಗೆ 11.45 ಗಂಟೆಗೆ ಅಯ್ಯಾಚಾರ ಹಾಗೂ ಭಕ್ತರಿಗೆ ದೀಕ್ಷೆ. ನಂತರ ಸಾಮೂಹಿಕ ವಿವಾಹಗಳು ಜರುಗಲಿವೆ. ವೀರೇಶ್ವರ ಶಿವಾಚಾರ್ಯ ಶ್ರೀಗಳಿಂದ ಮುಳ್ಳುಗದ್ದುಗೆ ಮಹೋತ್ಸವ ನಡೆಯಲಿದೆ. ಏ. 12 ರಂದು ಸಂಜೆ 4 ಗಂಟೆಗೆ ರಥೋತ್ಸವ. ರಾತ್ರಿ 8 ಗಂಟೆಗೆ ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಡೋಣಿ ಹಾಲಸೋಮೇಶ್ವರ ಶ್ರೀಗಳು, ಹಾಲವಿಶ್ವರಾಧ್ಯ ಹಾಲಸ್ವಾಮಿಗಳು, ದೊಡ್ಡ ಹಾಲಸ್ವಾಮಿಗಳು, ಅಭಿನವ ಹಾಲವೀರಪ್ಪಜ್ಜ ಶ್ರೀಗಳು, ಅಭಿಷೇಕ ಹಾಲಸ್ವಾಮಿಗಳು, ಉಮಾಪತಿ ಹಾಲಸ್ವಾಮಿಗಳು, ಮಳೆಯೋಗೀಶ್ವರ ಶ್ರೀಗಳು, ನಂದಿವೇರಿಮಠದ ಶಿವಕುಮಾರ ಶ್ರೀಗಳು, ಗುರುಮೂರ್ತಿ ಶ್ರೀಗಳು ಭಾಗವಹಿಸುವರು. ಏ. 13 ರಂದು ರಾತ್ರಿ 8 ಗಂಟೆಗೆ ಕಡುಬಿನ ಕಾಳಗ ನಡೆಯಲಿದೆ. ಏ. 14 ರಂದು ರಾತ್ರಿ 10ಕ್ಕೆ ಗ್ರಾಮದೇವತೆ ದೊಡ್ಡಾಟ ಕಲಾಮೇಳದಿಂದ ಸಂಪೂರ್ಣ ರಾಮಾಯಣ ಬಯಲಾಟ ಪ್ರದರ್ಶನಗೊಳ್ಳಲಿದೆ. ಜಾತ್ರಾ ಮಹೋತ್ಸವದಲ್ಲಿ ಮುಖಂಡರು ಭಾಗವಹಿಸಲಿದ್ದಾರೆಂದು ಮಂಡಳಿ ತಿಳಿಸಿದೆ.