Skip to main content

ಜಾತ್ಯತೀತ ಹಾಲಸ್ವಾಮಿ ಮಠ ಸೀಮಾತೀತ ,ವಿಕ ಸುದ್ದಿಲೋಕ | Nov 26, 2014, 06.28AM IST

ಜಾತ್ಯತೀತ ಹಾಲಸ್ವಾಮಿ ಮಠ ಸೀಮಾತೀತ

ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಶ್ರೀ ಹಾಲಸ್ವಾಮಿ ಮಠದಲ್ಲಿ ನಡೆದ ಲಕ್ಷ ದೀಪೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮವನ್ನು ನರಗುಂದ ಶಾಸಕ ಬಿ.ಆರ್. ಯಾವಗಲ್ ಇತ್ತೀಚೆಗೆ ಉದ್ಘಾಟಿಸಿದರು. ಹೂವಿನಹಡಗಲಿ; ಕುಂಬಾರ ಮಾಡಿದ ಹಣತೆ, ರೈತ ಬೆಳೆದ ಹತ್ತಿಯಿಂದ ಬತ್ತಿ ಮಾಡಿ, ಗಾಣಿಗ ತಯಾರಿಸಿದ ಎಣ್ಣೆಯಿಂದ ದೀಪ ಹಚ್ಚುವ ಮೂಲಕ ಶ್ರೀ ಹಾಲಸ್ವಾಮಿ ಮಠ ವಿಶೇಷ ಪರಂಪರೆಯ ಜಾತ್ಯತೀತ ಮಠವಾಗಿದೆ ಎಂದು ಸುಕ್ಷೇತ್ರ ನಂದಿಪುರದ ಶ್ರೀ ಮಹೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೇಹಡಗಲಿಯಲ್ಲಿ ಶ್ರೀ ಹಾಲಸ್ವಾಮಿ ಮಠದಲ್ಲಿ ಲಕ್ಷ ದೀಪೋತ್ಸವ ಹಾಗೂ ಶ್ರೀ ಹಾಲಸೋಮೇಶ್ವರ ಸ್ವಾಮೀಜಿಗಳ 50ಜನ್ಮದಿನೋತ್ಸವ ನಿಮಿತ್ತ ಇತ್ತೀಚೆಗ ಹಮ್ಮಿಕೊಂಡಿದ್ದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರಗುಂದ ಶಾಸಕ ಬಿ.ಆರ್. ಯಾವಗಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನಾದ್ಯಂತ ತನ್ನ ವ್ಯಾಪ್ತಿಯನ್ನು ಚಾಚಿರುವ ಶ್ರೀ ಮಠ ಸರಳತೆ ಮೂಲಕ ತನ್ನದೇ ಆದ ವಿಶೇಷತೆ ಹೊಂದಿದೆ ಎಂದರು.

ಕೊಟ್ಟೂರು ಚಾನುಕೋಟಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಅಭಿನವ ಶ್ರೀ ಹಾಲ ವೀರಪ್ಪಜ್ಜ ಸ್ವಾಮೀಜಿ, ಶ್ರೀ ಸಣ್ಣ ಹಾಲಪ್ಪಜ್ಜ ಸ್ವಾಮೀಜಿ ಮಾತನಾಡಿದರು. ಹಿರಿಯ ಸ್ವಾಮೀಜಿಗಳಾದ ಶ್ರೀ ಹಾಲ ವೀರಭದ್ರೇಶ್ವರ ಸ್ವಾಮೀಜಿ, ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ ಹಾಗೂ ಇತರ ಮುಖಂಡರು ಪಾಲ್ಗೊಂಡಿದ್ದರು. 50ವಸಂತಗಳನ್ನು ಪೂರೈಸಿರುವ ಶ್ರೀ ಹಾಲಸೋಮೇಶ್ವರ ಸ್ವಾಮೀಜಿಯ ತುಲಾಭಾರ, ಶ್ರೀ ಮಠದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು. ನಿಲುಗಲ್ ವೀರಪ್ಪ ಕಾರ್ಯಕ್ರಮ ನಿರ್ವಹಿಸಿದರು.

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.