http://vijaykarnataka.indiatimes.com/articleshow/45433335.cms
ಮುಳ್ಳುಗದ್ದುಗೆ ಮಹೋತ್ಸವವಿಕ ಸುದ್ದಿಲೋಕ | Dec 10, 2014, 04.04AM IST
ಕೂಡ್ಲಿಗಿ; ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ಶ್ರೀಹಾಲಸ್ವಾಮಿ ಮಠದಲ್ಲಿ ಹಾಲಸ್ವಾಮಿ ಕಾರ್ತಿಕೋತ್ಸವ ನಿಮಿತ್ತ ಹಾಲಸೋಮೇಶ್ವರ ಸ್ವಾಮೀಜಿಯಿಂದ ಮುಳ್ಳುಗದ್ದುಗೆ ಮಹೋತ್ಸವ ಭಾನುವಾರ ರಾತ್ರಿ ಜರುಗಿತು.
ಈ ಸಂದರ್ಭದಲ್ಲಿ ಹಿರೇಕುಂಬಳಗುಂಟೆ ಹಾಗೂ ಸುತ್ತಲಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಸ್ವಾಮೀಜಿ ಕುಳಿತಿದ್ದ ಮುಳ್ಳುಗದ್ದುಗೆಯನ್ನು ಹೊತ್ತು ಜಯಘೋಷಗಳನ್ನು ಮಾಡುತ್ತ ಮೆರವಣಿಗೆ ನಡೆಸಿದರು. ಸೋಮೇಶ್ವರ ಸ್ವಾಮೀಜಿ ಮುಳ್ಳುಗದ್ದುಗೆ ಮೇಲೆ ಕುಳಿತು ಪವಾಡ ಮೆರೆದರು.
ಭಕ್ತರಿಗೆ ಬರುವ ಕಷ್ಟಗಳು ನಮಗೆ ಬರಲಿ, ನಮ್ಮ ಸುಖ ಸಂತೋಷ ಭಕ್ತರಿಗೆ ಸಿಗಲಿ ಎಂಬ ಸದುದ್ದೇಶ ಈ ಮುಳ್ಳಿನ ಪವಾಡದ್ದಾಗಿದೆ ಎಂದು ಸ್ವಾಮೀಜಿ ಸೇರಿದಂತೆ ಕೆಲ ಭಕ್ತರು ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಹಿರೇಮಠದ ಎಚ್.ಎಂ.ಹಾಲಸ್ವಾಮಿ, ಎಚ್.ಎಂ.ಗಂಗಾಧರಸ್ವಾಮಿ ನೇತತ್ವವಹಿಸಿದ್ದರು ಹಾಗೂ ಗ್ರಾಮದ ಮುಖಂಡರು ಇದ್ದರು.